Breaking News

ವೇಗದೂತ ರೈಲ್ವೇ ಇಂಜಿನ್'ಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಕಾಡಾನೆಗಳು.

ಗುವಾಹಟಿ : ವೇಗದೂತ ರೈಲಿನ ಇಂಜನ್'ಗೆ ಸಿಲುಕಿ ಮರಿ ಆನೆ ಸೇರಿ ಮೂರು ಕಾಡಾನೆಗಳು ಸಾವನ್ನಪ್ಪಿದ ಘಟನೆ ಮದ್ಯ ಅಸ್ಸಾಂ'ನ ನಾಗಾಂವ್ ಜಿಲ್ಲೆಯಲ್ಲಿ ಜರುಗಿದೆ. ಈ ಘಟನೆಯೊಂದಿಗೆ ಅಸ್ಸಾಂನಲ್ಲಿ ಈ ತಿಂಗಳು ರೈಲಿಗೆ ಸಿಲುಕಿ ಮೃತಪಟ್ಟ ಆನೆಗಳ ಸಂಖ್ಯೆ ಏಳಕ್ಕೆ ಏರಿದೆ.
 ಘಟನೆ ಮದ್ಯ ಅಸ್ಸಾಂನ ಕಾಂಮ್ಪುರ್ ಹಾಗೂ ಜಮುನಮುಖ್ ರೈಲ್ವೇ ನಿಲ್ದಾಣಗಳ ಮಧ್ಯೆ ಸಂಭವಿಸಿದೆ. ಕಾಂಮ್ಪುರದಿಂದ ಶನಿವಾರ ಮುಂಜಾವು 4:50ರ ಸುಮಾರಿಗೆ ಹೊರಟಿದ್ದ ರೈಲ್ವೇ ಇಂಜನ್'ಗೆ ಸಿಲುಕಿ ಮೂರು ಕಾಡಾನೆಗಳು ಕೊನೆಯುಸಿರೆಳೆದಿದೆ.
ಇದೇ ತಿಂಗಳ ಡಿಸೆಂಬರ್ 5 ರಂದು ಕನ್ಯಾಕುಮಾರಿ-ದಿಬ್ರುಗರ್ ವಿವೇಕ್ ಎಕ್ಸಪ್ರೆಸ್ ರೈಲಿಗೆ ಸಿಲುಕಿ ಎರಡು ಗರ್ಭಿಣಿ ಆನೆಗಳು ಸೇರಿ ಮೂರು ಆನೆಗಳು ಮೃತಪಟ್ಟಿದ್ದವು, ಮರುದಿನ ಡಿಸಂಬರ್ 6 ರಂದು ಗೂಡ್ಸ್ ರೈಲಿಗೆ ಸಿಲುಕಿ ಮತ್ತೊಂದು ಆನೆ ಮೃತಪಟ್ಟಿತ್ತು.

No comments