Breaking News

ಉಗ್ರರ ಪರ ವಹಿಸುವ ವಕೀಲರ ಕೊಲ್ಲುವೆವು : ಹಿಂದೂ ಸೇನೆ ಪ್ರತಿಕ್ ಭಟ್


ರಾಜಕೋಟ: ಗುಜರಾತಿನಲ್ಲಿ ಸೆರೆಯಾದ ಇಬ್ಬರು ಶಂಕಿತ ಐಸಿಸ್ ಉಗ್ರರ ಪರ ವಹಿಸುವ ವಕೀಲರನ್ನು ಕೊಲ್ಲುವುದಾಗಿ ಬಲಪಂಥೀಯ ಸಂಘಟನೆ ಬಹಿರಂಗ ಬೆದರಿಕೆ ಒಡ್ಡಿದೆ.

ಗುಜರಾತಿನ ಹಿಂದೂ ಸೇನೆಯ ಅಧ್ಯಕ್ಷ ಪ್ರತಿಕ್ ಭಟ್ ಅವರು ವಕೀಲ ಇಮ್ತಿಯಾಜ್ ಕೊರೆಜಾ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಒಡ್ಡಿದ್ದಾರೆಂದು ತಿಳಿದುಬಂದಿದೆ. 'ಶಂಕಿತ ಉಗ್ರರ ಪರ ವಕಾಲತ್ತಿನಿಂದ ನ್ಯಾಯವಾದಿ ಇಮ್ತಿಯಾಜ್ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಇಮ್ತಿಯಾಜ್ ಕುಟುಂಬವನ್ನೇ ಸರ್ವನಾಶ ಮಾಡುತ್ತೇವೆ. ಅವರ ಜೀವಕ್ಕೆ ಅವರೇ ಹೊಣೆ,' ಎಂದು ಭಟ್ ಬಹಿರಂಗವಾಗಿ ಹೇಳಿದ್ದಾರೆ.ಇಮ್ತಿಯಾಜ್ ನಿವಾಸಕ್ಕೆ ಬೆಂಕಿ ಹಚ್ಚುವುದಾಗಿ ಭಟ್ ಬಹಿರಂಗ ಹೇಳಿಕೆ ನಂತರ ಜಾಮ್‌ನಗರದ ಪೊಲೀಸರು ಅವರನ್ನು ಬಂಧಿಸಿ, ಕೆಲ ಸಮಯದ ಬಳಿಕ ಬಿಡುಗಡೆ ಮಾಡಿದ್ದಾರೆ.

ರಾಜಕೋಟ್ ಬಾರ್ ಅಸೋಶಿಯೇಷನ್ ಸದಸ್ಯರು ಶಂಕಿತ ಐಸಿಸಿ ಉಗ್ರ ವಸೀಮ್ ರಾಮೊದಿಯಾ ಹಾಗೂ ಆತನ ಸಹೋದರ ನಯೀಮ್‌ ಪರ ವಕಾಲತ್ತು ವಹಿಸದಿರಲು ನಿರ್ಣಯಗೊಂಡಿದ್ದಾರೆ . ಜತೆಗೆ, ಪೊಲೀಸರ ಕಾರ್ಯವೈಖರಿಗೆ ಬೆಂಬಲ ಸೂಚಿಸಿದರು.
vk


loading...

No comments