Breaking News

"ಕೇರಳ ಸಿಎಂ ತಲೆ ತೆಗೆದರೆ ಒಂದು ಕೋಟಿ ರೂಪಾಯಿ" ಹೇಳಿಕೆ ವಾಪಾಸ್ ಪಡೆದ ಆರ್.ಎಸ್.ಎಸ್ ನಾಯಕ.

ಮಧ್ಯಪ್ರದೇಶ : ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದ್ದ ಆರ್.ಎಸ್.ಎಸ್ ಸಮಾವೇಶದಲ್ಲಿ ಆರ್.ಎಸ್.ಎಸ್ ನಾಯಕ ಚಂದ್ರಾವತ್ 'ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರೂಪಾಯಿ ಬಹುಮಾನ ರೂಪದಲ್ಲಿ ನೀಡುವುದಾಗಿ' ಬಹಿರಂಗ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಆರ್.ಎಸ್.ಎಸ್ ಕೂಡ ಇದು ನಮ್ಮ ಸಂಸ್ಕೃತಿ ಅಲ್ಲ, ಹಾಗಾಗಿ ಆ ಹೇಳಿಕೆಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಕೊನೆಗೂ ಆರ್.ಎಸ್.ಎಸ್ ಒತ್ತಡಕ್ಕೆ ಮಣಿದ ಚಂದ್ರಾವತ್ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದಿದ್ದಾರೆ. ತಾನು ಆರ್.ಎಸ್.ಎಸ್ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಕೇರಳ ಸಿಎಂ ತಲೆತೆಗೆದರೆ ಒಂದು ಕೋಟಿ ನೀಡೋದಾಗಿ ಹೇಳಿಕೆ ನೀಡಿದ್ದೆ. ನಾನು ಈಗ ಆ ಹೇಳಿಕೆಯನ್ನು ವಾಪಾಸ್ ಪಡೆಯುತ್ತಿದ್ದು ನನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
loading...

No comments