Breaking News

ಮಹಿಳೆ ಮೇಲೆ ಹರಿದ ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಕಾರು ಪ್ರಕರಣ ದಾಖಲು

 
ಬಜ್ಪೇ : 22ಜು ಮಂಗಳೂರಿನ ಬಜ್ಪೇ ಸಮಿಪ ಶನಿವಾರ  ಅಂದರೆ ಜು 21 ಸಂಜೆ 6.30 ರ ಸಮಯಕ್ಕೆ  ಬಜ್ಪೆ ಸಮಿಪದ ಕಿನ್ನಿಪದವು ಎಂಬಲ್ಲಿ ಶರವೇಗದಿಂದ ಬಂದ ಮೂಡುಬಿದ್ರೆ ಶಾಸಕ ಅಭಯ ಚಂದ್ರ ಜೈನ್ ಅವರ ಕಾರು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೊಗುತ್ತಿದ್ದ ಪಾದಚಾರಿ ಖತೀಜಮ್ಮ (48)  ಎಂಬುವವರಿಗೆ ಡಿಕ್ಕಿಯಾಗುತ್ತದೆ . ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಖತೀಜಮ್ಮ ಪಕ್ಕದ ಚರಂಡಿಗೆ ಎಸೆಯಲ್ಪಟ್ಟರು ಎಂದು ಹೇಳಲಾಗಿದೆ .

ಘಟನೆ ನಡೆದದ್ದನು ಮನಗಂಡ ಶಾಸಕ ಅಭಯ ಚಂದ್ರ ಜೈನ್ ಸೌಜನ್ಯಕ್ಕೂ ಆ ಮಹಿಳೆಯ ರಕ್ಷಣೆಗೆ ಬರುವುದನ್ನು ಬಿಟ್ಟು ಕಾರಿನಲ್ಲಿ ಕುಳಿತು ಉದಟತನ ಮೆರೆದಿದ್ದಾರೆ ಸ್ವಲ್ಪ ಸಮಯದ ಬಳಿಕ ಚರಂಡಿಯಿಂದ ಮೇಲೆದ್ದು ಶಾಸಕರ ಕಾರಿನ ಬಳಿಗೆ ಬಂದ ಮಹಿಳೆ ದಾದಯೆ ಓಂತೆ ಮೆಲ್ಲಾ ಪೋವೆರೆ ಆಪುಜಾ ( ಏನ್ರಿ ಸ್ವಲ್ಪ ನಿಧಾನಕ್ಕೆ ಹೋಗಲು ಆಗಲ್ಲವೆ ) ಎಂದು ಪ್ರಶ್ನೆ ಮಾಡಿದ್ದಾರೆ ಇದರಿಂದ ಕೋಪಗೊಂಡ  ಶಾಸಕರು ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಹಾಗೂ ಮಹಿಳೆಯನ್ನು ತಳ್ಳಿದ್ದಾರೆ ಎಂದು ವರದಿಯಾಗಿದೆ .

ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಪ್ರಕರಣ ದಾಖಲಾಗಿ ತಾನು ಮಾಡಿದ ತಪ್ಪಿಗೆ ಶಿಕ್ಷೆ ನಡೆಯುವ ಮೊದಲೆ ಜಾಮಿನು ಪಡೆದು ತಾನೊಬ್ಬ ಸರ್ವಾಧಿಕಾರಿ ತಾನು ಮಾಡಿದೆ ಸರಿ ಎಂಬತ್ತೆ ವರ್ತಿಸಿದ್ದು ಸಾರ್ವಜನಿಕರಲ್ಲಿ ಬಾರಿ ಆಕ್ರೋಶ ಉಂಟು ಮಾಡಿದೆ.



No comments