Breaking News

50 ವರ್ಷ ದೇಶವನ್ನಾಳಿದ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡಿದ್ರೆ ದೇಶದ ಬಡತನ ನಿವಾರಣೆ: ಮುತಾಲಿಕ್



ಬಾಗಲಕೋಟ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ನಡೆದಿರುವ ಐಟಿ ದಾಳಿಯನ್ನು ಸಮರ್ಥಿಸಿಕೊಂಡ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು, 50 ವರ್ಷ ದೇಶವನ್ನಾಳಿದ ಕಾಂಗ್ರೆಸ್ ನಾಯಕರು ಹಾಗೂ ಸಚಿವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ರೆ ದೇಶದ ಬಡತನ ನಿವಾರಣೆಯಾಗುವಷ್ಟು ಅಕ್ರಮ ಸಂಪತ್ತು ದೊರೆಯುತ್ತದೆ ಎಂದು ಗುಡುಗಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ವಿವಾದ ಗಂಭೀರ ವಿಷಯವಾಗಿದೆ. ವೀರಶೈವ ಒಡಕಿನ ಲಾಭವನ್ನು ಕೆಲ ದುಷ್ಟಶಕ್ತಿಗಳು ಪಡೆಯುವ ಅಪಾಯ ಇದ್ದು, ಈ ಬಗ್ಗೆ ಎಲ್ಲರೂ ಯೋಚಿಸುವದು ಅಗತ್ಯವಾಗಿದೆ. ಭಿನ್ನಾಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಬಗೆಹರಿಸಿಕೊಳ್ಳವ ಅವಶ್ಯಕತೆ ಇದೆ ಎಂದು ಹೇಳಿದರು.

No comments