Breaking News

ನಳಿನ್ ಕುಮಾರ್ ಮತ್ತು ಮೊಯಿದೀನ್ ಭಾವ ಕರಾವಳಿಯ ಅಸಮರ್ಥ ನಾಯಕರು :ಮುನೀರ್ ಕಾಟಿಪಳ್ಳ



ಸುರತ್ಕಲ್ :ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಶಾಸಕ ಮೊಇದೀನ್ ಭಾವ ಕ್ಷೇತ್ರದ  ಜನರ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ವಿಫಲರಾಗಿದ್ದಾರೆ ಎಂದು ಸುರತ್ಕಲ್ ಕಾನಾ ನಾಗರಿಕ ಹಿತ ರಕ್ಷಣಾ ಸಮಿತಿಯ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಸಮಿತಿ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಉಪಕೇಂದ್ರದ ಮುಂಬಾಗ ಸುರತ್ಕಲ್ ಕಾನಾ  MRPL ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಶಾಸಕ ಮೊಯಿದೀನ್ ಭಾವ ಅವರು ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಕ್ಷೇತ್ರದಲ್ಲಿ ಪೋಸು ಕೊಡುತ್ತಿದ್ದಾರೆ ಹೊರತು ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಇಂದು ನಡೆಯುತ್ತದೆ ನಾಳೆ ನಡೆಸುತ್ತದೆ ಎಂಬ ಉತ್ತರ ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ, ಮಂಗಳೂರಿನ ಸಂಸದರಂತೂ ಇದ್ಯಾವುದರ ಅರಿವೇ ಇಲ್ಲದಂತೆ ಬ್ಯಾನರ್ ಮತ್ತು ಪೇಪರ್ ಜಾಹಿರಾತುಗಳಿಗೆ ಸೀಮಿತರಾಗಿಬಿಟ್ಟಿದ್ದಾರೆ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು  ಎಂದು ತಿಳಿದು ಬಂದಿದೆ 

No comments