Breaking News

ಗೋ ಮಾತೆಗೆ ಜೈಕಾರ ಕೆರಳಿದ ಪಿಣರಾಯಿ


- ಜೈಲು ಅಧಿಕಾರಿ ಅಮಾನತು


ಕಾಸರಗೋಡು: ಶ್ರೀರಾಮಚಂದ್ರಪುರ ಮಠದ ವತಿಯಿಂದ ಕೇರಳದ ಚಿಮೇನಿ ತೆರೆದ ಜೈಲಿನ ಗೋ ಸಂರಕ್ಷಣೆ ಕೇಂದ್ರಕ್ಕೆ ಗೋವುಗಳನ್ನು ನೀಡುವ ಸಂದರ್ಭ ನಡೆದಿದೆ ಎನ್ನಲಾದ ಗೋ ಪೂಜೆ ಹಾಗೂ ಗೋ ಮಾತೆಗೆ ಜೈಕಾರ ವಿಚಾರದಲ್ಲಿ ಕೆರಳಿದ ಎಡರಂಗ ಸರಕಾರ, ಜೈಲು ಸೂಪರಿಂಟೆಂಡೆಂಟ್‌ರನ್ನು ಅಮಾನತು ಮಾಡಿದೆ.

ಚಿಮೇನಿ ತೆರೆದ ಜೈಲಿನಲ್ಲಿ ಗೋ ಶಾಲೆ, ಆಡು ಸಾಕಣೆ ಕೇಂದ್ರಗಳು ಆರಂಭಗೊಂಡಿದ್ದು, ರಾಮಚಂದ್ರಪುರ ಮಠದಿಂದ ಗೋವುಗಳನ್ನು ನೀಡಲಾಗಿದೆ. ಗೋ ಹಸ್ತಾಂತರ ಸಂದರ್ಭ ನಡೆದ ಕಾರ‍್ಯಕ್ರಮದಲ್ಲಿ ರಾಮಚಂದ್ರಪುರ ಮಠಾಧಿಧೀಶ ಶ್ರೀರಾಘವೇಶ್ವರ ಸ್ವಾಮೀಜಿ ಉಪಸ್ಥಿತಿಯಲ್ಲಿ ಗೋ ಪೂಜೆ ನಡೆದಿತ್ತು. ಅಲ್ಲದೆ ಜೈಲಿನಲ್ಲಿ ಗೋ ಮಾತೆಗೆ ಜೈಕಾರ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲು ಸೂಪರಿಂಟೆಂಡೆಂಟ್‌ ಸುರೇಶ್‌ನ್ನು ಅಮಾನತು ಮಾಡಲಾಗಿದೆ.

ಇದಕ್ಕೆ ಸಂಬಂಧಿಧಿಸಿದಂತೆ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಜೈಲು ಐಜಿ ಆರ್‌.ಶ್ರೀಲೇಖಾರಿಗೆ ಆದೇಶಿಸಿತ್ತು. ತನಿಖಾ ತಂಡ ನೀಡಿದ ವರದಿ ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಉತ್ತರ ವಲಯ ಜೈಲು ಡಿಐಜಿ ಶಿವದಾಸ್‌ ತೈಪರಂಬಿಲ್‌ ತನಿಖೆ ನಡೆಸಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌  ಜೈಲಿನಲ್ಲಿ ಗೋ ಪೂಜೆ ನಡೆದಿರುವುದು ತಪ್ಪೆಂದು ಹೇಳಿದ್ದಾರೆ.

ಜೈಲಿಗೆ ಗೋವುಗಳನ್ನು ಸಂಘ-ಸಂಸ್ಥೆಗಳು ಈ ಹಿಂದೆಯೂ ನೀಡಿದ್ದವು. ಅದರಂತೆ ಶ್ರೀರಾಘವೇಶ್ವರ ಸ್ವಾಮೀಜಿ 20 ದನಗಳನ್ನು ನೀಡಲು ಮುಂದೆ ಬಂದಿದ್ದರು. ಜೈಲು ಸೂಪರಿಂಟೆಂಡೆಂಟ್‌ ಸುರೇಶ್‌ ಕುಮಾರ್‌ ಸಮ್ಮುಖದಲ್ಲೇ ಮೊದಲ ಹಂತದ ಗೋವು ಹಸ್ತಾಂತರ ನಡೆದಿತ್ತು.
ಹಿಂದುತ್ವ ವಿರೋಧಿ ನಿಲುವು : ಈ ಪ್ರಕರಣದಲ್ಲಿ ಸೂಪರಿಂಟೆಂಡೆಂಟ್‌ರನ್ನು ಅಮಾನತುಗೊಳಿಸಿರುವುದು ಹಿಂದೂ ಆಚಾರ, ಅನುಷ್ಠಾನಗಳ ವಿರೋಧಿ ನಿಲುವು ಎಂದು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್‌ ಆರೋಪಿಸಿದ್ದಾರೆ.

ಗೋ ಪೂಜೆ ನಡೆಸುವುದು ಮತ್ತು ಗೋ ಮಾತೆಗೆ ಜೈಕಾರ ಹಾಕುವುದು ತಪ್ಪಲ್ಲ. ಹಿಂದೂಗಳ ಆಚರಣೆಗಳನ್ನು ಕೋಮು ಭಾವನೆಯಿಂದ ಚಿತ್ರೀಕರಿಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಕೊಡುಗೆಯಾಗಿ ಜೈಲಿಗೆ ಗೋವುಗಳು ಲಭಿಸಿವೆ. ಮುಸ್ಲಿಂ ಮತ ಪಂಡಿತರು, ಕ್ರಿಶ್ಚಿಯನ್‌ ಗುರುಗಳು ಅವರ ಮತ ಚಿಂತನೆಗಳನ್ನು ರಾಜ್ಯದ ಜೈಲುಗಳಲ್ಲಿ ಉಪದೇಶಿಸಲು ಸರಕಾರವೇ ವ್ಯವಸ್ಥೆ ಕಲ್ಪಿಸುತ್ತಿದೆ. ಅದರಲ್ಲಿ ಯಾವುದೇ ತಪ್ಪು ಕಾಣದ ಸರಕಾರ ಹಿಂದೂ ಆಚಾರಗಳನ್ನು ಮಾತ್ರ ಅವಹೇಳನ ಮಾಡುವುದು ಸರಿಯಲ್ಲ. ತಕ್ಷಣ ಸೂಪರಿಂಟೆಂಡೆಂಟ್‌ ಅಮಾನತು ರದ್ದುಗೊಳಿಸಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜನರ ಕ್ಷಮೆ ಕೋರಬೇಕೆಂದು ಅವರು ಆಗ್ರಹಿಸಿದ್ದಾರೆ.
ಕ್ರಪೆ -vijayakaranata

loading...

No comments