Breaking News

ವಜ್ರದೇಹಿ ಶ್ರೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಡಿವೈಎಫ್‌ಐ ಆಗ್ರಹ


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನಲ್ಲಿ ಹತ್ಯೆಯಾದ  RSS ಕಾರ್ಯಕರ್ತ ಶರತ್ ಹತ್ಯೆಯ ಹಂತಕರ ಮಾಹಿತಿ ಇದೆ ಎಂದು ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ ತಮ್ಮ  ಪತ್ರಿಕಾಗೋಷ್ಟಿ ಮೂಲಕ ತಿಳಿಸಿದ್ದಾರೆ. ಸ್ವಾಮೀಜಿ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಾಗಿರುತ್ತಾರೆ. ಶರತ್ ಹತ್ಯೆ ಪ್ರಕರಣದ ಸ್ಟೋಟಕ ಮಾಹಿತಿ ಅವರ ಬಳಿ ಇದ್ದಲ್ಲಿ ಅದನ್ನು  ಕೂಡಲೇ  ಪೊಲೀಸ್ ಇಲಾಖೆಗೆ ಒದಗಿಸಿಕೊಡಬೇಕು. ಆ ಮೂಲಕ ಶರತ್ ಹಂತಕರ  ಬಂಧನಕ್ಕೆ  ಸಹಕರಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿದ್ದಾರೆ  ಎಂದು ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.

No comments