Breaking News

Breaking news! ಐಟಿ ಅಧಿಕಾರಿಗಳೊಂದಿಗೆ ಅಸಭ್ಯ ವರ್ತನೆ ಡಿಕೆ ಶಿವಕುಮಾರ್ ಆರೆಸ್ಟ್ ?


ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಇಂದು ಅಂದರೆ ಅಗಸ್ಟ್ 2 ಮುಂಜಾನೆ ನಾಲ್ಕು ಗಂಟೆ ಸಮಯಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ದಾಖಲೆ ಇಲ್ಲದ ಆಭರಣಗಳು ಹಾಗೂ ದಾಖಲೆ ಇಲ್ಲದ 7.5 ಕೋಟಿ ಹಣವನ್ನು ಈವರೆಗೆ ವಶಪಡಿಸಕೊಂಡಿದ್ದಾರೆ


   ಇನ್ನೂ ಶೋಧ ಕಾರ್ಯ ಮುಂದುವರೆಸಿದ ಅಧಿಕಾರಿಗಳು ಇದೀಗ  ಡಿಕೆ ಶಿವಕುಮಾರ್ ಅವರ ರಹಸ್ಯ ಕೋಣೆಯಲ್ಲಿ ಇರುವ ಲಾಕರ್ ತೆರೆಯಲು ಮುಂದಾಗಿದ್ದು ಆದರೆ ಡಿಕೆ ಶಿವಕುಮಾರ್ ಇದಕ್ಕೆ ಪ್ರತಿರೋಧ ತೋರಿದ್ದು ಅಧಿಕಾರಿ ಗಳೊಡನೆ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಕರ್ ಕಿಲಿ  ಕೈ ಶಿವಕುಮಾರ್ ಬಳಿ ಇದ್ದು ಅದನ್ನು ಅಧಿಕಾರಿಗಳಿಗೆ ನೀಡಲು ಹಿಂದೆಟ್ಟು ಹಾಕುತ್ತಿದ್ದು ಈ ಸಂಭಂದ ಅವರನ್ನು ಬಂಧಿಸಲು ಅಧಿಕಾರಿಗಳು ಮಂದಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ .

ಲಾಕರ್ ಕಿಲಿ ಕೈ ನೀಡದಿದ್ದರೆ ಅವರನ್ನು ಬಂಧಿಸುವ ಸಾದ್ಯತೆ ಇದೇ ಎಂದು ಖಾಸಗಿ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿ ವರದಿ ಮಾಡಿದೆ .

ಸದ್ಯ ಐಟಿ ಅಧಿಕಾರಿಗಳ ದಾಳಿಯಿಂದ  ಗಂಟೆಗೆ ಒಂದು ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿದ್ದಂತೆ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯದಾದ್ಯಂತ ತೀವ್ರ ಆಕ್ರೋಶ ಭುಗಿಲೆದ್ದಿದೆ .


No comments