Breaking News

ಶೋಭ ಕರಂದ್ಲಾಜೆಯವರ ಆಕ್ರಮ ಭೇನಾಮಿ ಆಸ್ತಿ ಮೇಲೆ ತನಿಖೆಗೆ ಆಗ್ರಹ


ಪುತ್ತೂರು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭ ಕರಂದ್ಲಾಜೆಯವರು ಅಕ್ರಮ ಭೇನಾಮಿ ಆಸ್ತಿ ಹೊಂದಿದ್ದಾರೆ ಎನ್ನುವ ಆರೋಪ ರಾಜ್ಯದಾದ್ಯಂತ ಸಂಚಲನ ಉಂಟು ಮಾಡಿದೆ.

ಕಾರಣ ಪುತ್ತೂರಿನಲ್ಲಿ ಕೋಟಿ ವೆಚ್ಚದಲ್ಲಿ ಭವ್ಯ ಬಂಗಲೆ ನಿರ್ಮಿಸಿದು ಈಗ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಪತ್ರಕರ್ತರೊಂದಿಗೆ ಮಾತಾನಾಡಿದ ಸ್ಥಳೀಯ ಜೆಡಿಎಸ್ ಮುಖಂಡ ಅಮರನಾಥ್ ಶೆಟ್ಟಿ ಇವರಿಗೆ ಈ ಭವ್ಯ ಬಂಗಲೆ ಕಟ್ಟಲು ಬಂದ ಹಣದ ಮೂಲ ಯಾವುದು ಎಂದು ಪ್ರಶ್ನಿಸಿದರು ಹಾಗೂ ಮೋದಿಯವರು ಎಲ್ಲಾ ಸಂಸದರ ಶಾಸಕರ ಬ್ಯಾಂಕ್ ಖಾತೆಗಳ 50 ದಿನಗಳ ವಿವರ ಕೇಳಿದ್ದು ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಇವರಿಗೆ ತಾಕತ್ ಇದ್ದರೆ ಲೋಕಸಭಾ ಚುನಾವಣೆ ಬಳಿಕದ ಎಲ್ಲಾ ಬ್ಯಾಂಕ್ ದಾಖಲೆಗಳನ್ನು ಕೇಳಲ್ಲಿ ಎಂದು ವಾಗ್ದಾಳಿ ನಡೆಸಿದ್ದರು . ಅಲ್ಲದೆ ನೋಟ್ ರದ್ದತಿ ಉತ್ತಮ ಆದರೆ ಜನಸಾಮಾನ್ಯರ ಪಾಲಿಗೆ ಮಾತ್ರ ವಿಷಯವಾಗಿದ್ದು ಕೆಲವು ಪೂರ್ವ ತಯಾರಿ ಇಲ್ಲದೆ ಮಾಡಿದ್ದು ಬಡವನ ಊಟಕ್ಕೆ ಕಲ್ಲು ಹಾಕಿದಂತಾಯಿತ್ತು ಎಂದರು .

ಇವರೊಂದಿಗೆ ಎಂ ಬಿ ಸದಾಶಿವ ಮತಾನಾಡಿ ಮೊದಲು ಮನೆಯ ಮದುವೆ ಕಾಗದ (ಆಮಂತ್ರಣ ಪತ್ರಿಕೆ) ದೇವರ ಮುಂದೆ ಇಟ್ಟು ಪೂಜೆ ಮಾಡುತ್ತಿದ್ದೆವು ಈಗ ಬ್ಯಾಂಕಗಳಲ್ಲಿ ಇಟ್ಟು ಪೂಜೆ ಮಾಡಬೇಕಾದ ಪರಿಸ್ಥಿತಿ ತಂದಿದ್ದಾರೆ ಮುಂದಿನ ಚುನಾವಣೆಯಲ್ಲಿ ಜನರೆ ಇದಕ್ಕೆಲ್ಲ ಉತ್ತರ ಕೊಡುತ್ತಾರೆ ಅಂತ ಹೇಳಿದರು

2 comments:

  1. Bada Janarige alla thondare agirodu .. Politicians ge .. Haudalwa

    ReplyDelete
  2. ivaradu matravalla yeddi inda ididu sidduvarege yella rajakeeya vyaktigala tanike aagabeku yenanthira........

    ReplyDelete