ಹಿಂದೂ ಪ್ರತಿಪಾದಕ ದೀಪಕ್ ಕಾಮತ್ ಬಂಧನ
ಮಂಗಳೂರು : ಅಂಬೇಡ್ಕರ್ ಅವರನ್ನು ನಿಂದಿಸಿದ ಆರೋಪಕ್ಕೆ ಗುರಿಯಾಗಿರುವ ಹಿಂದುತ್ವ ಪ್ರತಿಪಾದಕ ದೀಪಕ್ ಕಾಮತ್ ಅವರನ್ನು ಇಂದು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಬರಹದ ಕುರಿತಾಗಿ ನಿಂದನೆ ಆರೋಪಕ್ಕೆ ಗುರಿಯಾದ ದೀಪಕ್ ಕಾಮತ್ ಅವರ ವಿರುದ್ಧ ರಮೇಶ್ ಕೋಟ್ಯಾನ್ ಇತ್ತೀಚಿಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನಲೆಯಲ್ಲಿ ಬುಧವಾರ ಸಂಜೆ ಪೊಲೀಸರು ದೀಪಕ್ ಕಾಮತ್ ಅವರನ್ನು ನಗರದ ಖಾಸಗಿ ಹೋಟೆಲ್ ನಿಂದ ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ದೀಪಕ್ ಕಾಮತ್ ಮೂಲತಃ ಬೆಂಗಳೂರಿನಲ್ಲಿ ನೆಲೆಸಿದ್ದು rss ಮುಖವಾಣಿಯಾದ ಅಸ್ಸಿಮಾ ಮಾಜಿ ಬರಹಗಾರರು ಆಗಿರುತ್ತಾರೆ. ಮೂಗಿನ ನೇರವಾದ ಬರಹದಿಂದ ಹಲವಾರು ರಾಜಕಾರಣಿಗಳ ಉದ್ಯಮಿಗಳ ನಿಜ ಬಣ್ಣ ಬಯಲು ಮಾಡುತ್ತಿದ್ದ ಇವರು ವೆಬ್ಸೈಟ್ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸದ್ದು ಮಾಡಿದ್ದರು.
ತಮ್ಮ ಪ್ರಖರ ಹಿಂದುವಾದದ ಮುಖೇನಾ ಹಲವಾರು ಪ್ರತಿಷ್ಠಿತ ವ್ಯಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರನ್ನು ಅವಾಚ್ಯ ಪದ ಬಳಕೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
No comments