Breaking News

ನರಭಕ್ಷಕ ಬಾಲಕ ಕೊಂದು, ರಕ್ತ ಕುಡಿದು ಏನು ಮಾಡಿದ ಗೊತ್ತೇ ?


ಲೂಧಿಯಾನ : ಅಪ್ರಾಪ್ತ ಬಾಲಕನೊಬ್ಬ ನರಭಕ್ಷಕನಂತೆ ವರ್ತಿಸಿದ ಘಟನೆ ಒಂದು ವರದಿ ಆಗಿದೆ 9 ವರ್ಷದ ಬಾಲಕನೊಬ್ಬನನ್ನು ಭೀಕರವಾಗಿ ಕೊಂದು ದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಭಕ್ಷಿಸಿ, ರಕ್ತ ಕುಡಿದ ಆರೋಪದ ಮೇಲೆ ಪಂಜಾಬ್‍ನ ಲೂಧಿಯಾನದ 16 ವರ್ಷದ ಹುಡುಗನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ಘಟನೆ ನಡೆದ ಹಿಂದಿನ ದಿನ ಮೃತ  ಬಾಲಕ  ದೀಪು ಕುಮಾರ್ ಕಾಣೆಯಾಗಿದ್ದ ಮರುದಿನ ಲೂಧಿಯಾನದ ದುರ್ಗಿ ಪ್ರದೇಶದ ನಿರ್ಜನ ಸ್ಥಳವೊಂದರಲ್ಲಿ ತಲೆ ಕತ್ತರಿಸಿದ್ದ ಆತನ ದೇಹ ಪತ್ತೆಯಾಗಿತ್ತು. ಕಗ್ಗೊಲೆಯಾದ ಬಾಲಕ ಮತ್ತು ಈ ಭೀಕರ ಕೃತ್ಯ ಎಸಗಿದ ಹುಡುಗ ಇವರಿಬ್ಬರು ಒಂದೇ ಓಣಿಯ ವಲಸೆ ಕಾರ್ಮಿಕರ ಮಕ್ಕಳು.

ಬಾಲಕನ ತಲೆ ಕತ್ತರಿಸಿ, ಗಟಗಟನೆ ರಕ್ತ ಕುಡಿದ 8ನೇ ತರಗತಿ ವಿದ್ಯಾರ್ಥಿಯು ದೇಹವನ್ನು ಆರು ತುಂಡುಗಳಾಗಿ ಮಾಡಿ ಅವುಗಳನ್ನು ಭಕ್ಷಿಸಿದ, ನಂತರ ಕೈಕಾಲು-ಮುಖ ತೊಳೆದುಕೊಂಡು ಏನೂ ಗೊತ್ತಿಲ್ಲದಂತೆ ಮನೆಗೆ ಹಿಂದಿರುಗಿದ. ಅಲ್ಲದೇ ಆತನ ತಾಯಿ ಚಂಡೀಗಢಕ್ಕೆ ಹೋದ ಕಾರಣ ತಮ್ಮ ತಂದೆಗೆ ಈ ಹಂತಕ ಅಡುಗೆಯನ್ನೂ ತಯಾರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಶಿಕ್ಶಕರನ್ನು  ದ್ವೇಷಿಸುತ್ತಿದ್ದ ಆರೋಪಿ ಬಾಲಕ ಶಾಲೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮೃತ ಬಾಲಕನ ದೇಹದ ಬಾಗವನ್ನು ಶಾಲಾ ಆವರಣದಲ್ಲಿ ಎಸೆದಿದ್ದ ಮತ್ತು ಶಾಲೆಯ ವಾಟರ್‍ಟ್ಯಾಂಕ್‍ನಲ್ಲಿ ಕೊಳೆತ ಹೃದಯವನ್ನು ವಶಪಡಿಸಿಕೊಳ್ಳಲಾಗಿದೆ. ಹಂತಕನನ್ನು ಪೊಲೀಸರು ದೈಹಿಕ ಮತ್ತು ಮಾನಸಿಕ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಈ ಭೀಭತ್ಸ ಘಟನೆಯಿಂದ ಲೂಧಿಯಾನ ಜನತೆ ಬೆಚ್ಚಿ ಬಿದ್ದಿದ್ದಾರೆ.


loading...

No comments