Breaking News

ಈಶ್ವರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರಪತ್ರ ಹಂಚಿದರು ?


ಬೆಂಗಳೂರು,- ರಾಜ್ಯ ಕಮಲಾ ಪಾಳಯದಲ್ಲಿ ಈಶ್ವರಪ್ಪ  ಬೆಂಬಲಿಗರು ಅಚ್ಚರಿಯ ಬೆಳವಣಿಗೆಯೊಂದು ಮೂಡಿಸಿದ್ದಾರೆ .ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಂದು ಅವರ ಬೆಂಬಲಿಗರು ಅರಸೀಕೆರೆ ತಾಲೂಕಿನಲ್ಲಿ  ಕರಪತ್ರ ಮುದ್ರಿಸಿ ಹಂಚುವ ಮೂಲಕ  ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿರೋಪ್ಪನವರಿಗೆ  ಟಾಂಗ್ ನೀಡಿದ್ದಾರೆ . ಇದಕ್ಕೂ ಮುನ್ನ ಸಂಗೊಳ್ಳಿರಾಯಣ್ಣ ಬ್ರಿಗೇಡ್ ನಿಲ್ಲಿಸಬೇಕೆಂದು ಪಕ್ಷದ ವರಿಷ್ಠರು ಸೂಚಿಸಿದ್ದರೂ ಸಹ ತಾಯಿ ಮೇಲೆ ಆಣೆ ಬ್ರಿಗೇಡ್ ನಿಲ್ಲಿಸುವುದಿಲ್ಲ. ಆ ಮೂಲಕ ಬಡವರ, ಶೋಷಿತರ ಪರ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಈಶ್ವರಪ್ಪನವರು ವರಿಷ್ಠರಿಗೆ ಸೆಡ್ಡು ಹೊಡೆದಿದ್ದರು.ಇದೀಗ ಮುಂದಿನ ಬಿಜೆಪಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಎಂದು ಬೆಂಬಲಿಗರು ಅರಸೀಕೆರೆಯಲ್ಲಿ ಕರಪತ್ರ ಹೊರಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. 

No comments