ಜಲ್ಲಿಕಟ್ಟು ಆಚರಣೆಗೆ ಪಟ್ಟು ಹಿಡಿದ ಸಿಎಂ ಪನ್ನೀರಸೆಲ್ವಂ
ತಮಿಳುನಾಡು : ಪೊಂಗಲ್ ಪ್ರಯುಕ್ತ ತಮಿಳುನಾಡು ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆದೇ ನಡೆಯುತ್ತದೆ ಎಂದು ತಮಿಳುನಾಡು ಸಿಎಂ ಪನ್ನೀರಸೆಲ್ವಂ ಪಟ್ಟು ಹಿಡಿದಿದ್ದಾರೆ .ಈ ಸಂಬಂಧ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಅವರು, ಈ ವರ್ಷ ಜಲ್ಲಿಕಟ್ಟು ಕ್ರೀಡೋತ್ಸವ ತಮಿಳುನಾಡಿನಲ್ಲಿ ನಡೆದೇ ತೀರುತ್ತದೆ. ಕ್ರೀಡೋತ್ಸವ ಪುನರಾರಂಭಿಸುವ ಯತ್ನಗಳಿಂದ ತಮಿಳುನಾಡು ಸರ್ಕಾರ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಜಲಿಕಟ್ಟು ಆಚರಣೆಗೆ ಗೂಳಿಗಳನ್ನು ಬಳಸುವುದಕ್ಕೆ 2014ರಲ್ಲಿ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ನಿಷೇಧಿತ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಇದೀಗ ತಮಿಳು ನಾಡು ಸರ್ಕಾರ ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ .
https://twitter.com/AIADMKOfficial/status/819080783587512320?ref_src=twsrc%5Etfw
No comments