Breaking News

49 ಅನಾಥರ ಶವಸಂಸ್ಕಾರ ನಡೆಸಿದ ಸಾಮಾಜಿಕ ಕಾರ್ಯಕರ್ತರು



ಉಡುಪಿ : ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ಸಾಮಾಜಿಕ ಕಾರ್ಯಕರ್ತರ ಶ್ರಮದಾನದ ಸಹಕಾರದೊಂದಿಗೆ ಸುಮಾರು 32 ವರ್ಷದ ಅಪರಿಚಿತ ಯುವಕನ ಶವಸಂಸ್ಕಾರ ಉಡುಪಿ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನೆರವೆರಿಸಿದರು. ಇದರೊಂದಿಗೆ ವಿಶು ಶೆಟ್ಟಿ ಅವರು ವಾರಸುದಾರರಿಲ್ಲದ 49ನೇ ಶವಸಂಸ್ಕಾರ ನಡೆಸದಂತಾಗಿದೆ.

ಜ 19ರಂದು ಅಪರಿಚಿತ ವ್ಯಕ್ತಿಯೊಬ್ಬ ಮಲ್ಪೆ ಪೆÇಲೀಸ್ ಠಾಣೆ ವ್ಯಾಪ್ತಿಯ ಬಸ್ ತಂಗುದಾಣದಲ್ಲಿ ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ 20ರಂದು ಆತ ಮೃತಪಟ್ಟ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ವಾರಸುದಾರರ ಬರುವಿಕೆಗಾಗಿ ಇಡಲಾಗಿತ್ತು. ಆತನ ಶರ್ಟು ಜೇಬಿನಲ್ಲಿ ಪೀಲಿಫ್ಸ್ ಗ್ರೇಬಿಯಲ್, ತಂದೆ ಡೇವಿಡ್, ಗುಜರಾತ್ ರಾಜ್ಯದ ಸೂರತ್ ಎನ್ನುವ ವಿಳಾಸದ ಆಧಾರ್ ಚೀಟಿ ಪತ್ತೆಯಾಗಿತ್ತು. ವಿಳಾಸದ ಆಧಾರದ ಮೇಲೆ ಮಲ್ಪೆ ಪೆÇಲೀಸರು ವಾರಸುದಾರರ ಹುಡುಕಾಟಕ್ಕಾಗಿ ಗುಜರಾತಿಗೆ ಹೋದಾಗ ಆ ವಿಳಾಸದಲ್ಲಿ ಯಾರು ವಾಸ್ತವ್ಯ ಇರಲ್ಲಿಲ್ಲ.

ವಿಶು ಶೆಟ್ಟಿಯವರು ಉಡುಪಿಯಲ್ಲಿರುವ ಉತ್ತರ ಭಾರತದ ಬಹಳಷ್ಟು ವಲಸೆ ಕಾರ್ಮಿಕರಲ್ಲಿ ಮೃತ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದರೂ ಯಾವೊಂದು ಮಾಹಿತಿ ದೊರೆಯಲಿಲ್ಲ. ಪೊಲೀಸರು  ಮೃತವ್ಯಕ್ತಿಯ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಿಯೂ ಯಾರು ಬಾರದ ಕಾರಣ, ವ್ಯಕ್ತಿ ಮೃತಪಟ್ಟು 31 ದಿನಗಳ ನಂತರ ಫೆ 21ರಂದು ಶವಮಹಜರು-ಕಾನೂನು ಪ್ರಕ್ರಿಯೆ ನಡೆದ ಅನಂತರ, ವಿಶು ಶೆಟ್ಟಿ ಮುಂದಾಳಾತ್ವದಲ್ಲಿ ಮಲ್ಪೆ ಪೆÇಲೀಸರ ಸಮಕ್ಷಮ ಶವಕ್ಕೆ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳ ಗೌರವ ಸಲ್ಲಿಸಿ, ಕಾನೂನು ಪ್ರಕಾರ ದಫನ ಮಾಡಲಾಯಿತು.

ಶವಸಂಸ್ಕಾರದ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತರಾದ ತಾರಾನಾಥ್ ಮೇಸ್ತ ಶಿರೂರು, ರಾಮದಾಸ್ ಪಾಲನ್ ಉದ್ಯಾವರ ಶ್ರಮದಾನದ ಮುಖಾಂತರ ಸಹಕರಿಸಿದರು. ಶವಕ್ಕೆ ಬೇಕಾದ ಬಿಳಿಬಟ್ಟೆ, ಹೂಹಾರ, ಜೆಸಿಬಿ ಯಂತ್ರದ ಬಾಡಿಗೆ, ಶವಸಂಸ್ಕಾರಕ್ಕೆ ತಗಲಿದ ಖರ್ಚನ್ನು ವಿಶು ಶೆಟ್ಟಿ ಭರಿಸಿದರು

loading...

No comments