Breaking News

ಶಾಸಕ ಅಂಬರೀಷ್‌ ಬಿಜೆಪಿಗೆ ?


ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ಪಕ್ಷ ತೊರೆದ ಬೆನ್ನಲ್ಲೇ ಶಾಸಕ ಅಂಬರೀಷ್‌ ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಅಂಬರೀಷ್‌ ಅವರೊಂದಿಗೆ ಬಿಜೆಪಿಯ ಆರ್‌. ಅಶೋಕ್‌, ಸತೀಶ್‌ ರೆಡ್ಡಿ ಹಾಗೂ ಇತರೆ ಮುಖಂಡರು ಫೆಬ್ರುವರಿ 3ರಂದು ದುಬೈನ ಹೋಟೆಲ್‌ ಒಂದರಲ್ಲಿ ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.


ಅಂಬರೀಷ್‌ ಬಿಜೆಪಿಗೆ ಸೇರಿದರೆ ರಾಜ್ಯಸಭಾ ಸದಸ್ಯತ್ವ ನೀಡುವ ಭರವಸೆ ನೀಡಲಾಗಿದೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಅಂಬರೀಷ್‌ ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
loading...

No comments