Breaking News

ಮೋದಿ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ.

ಮೈಸೂರು : ಕಾಂಗ್ರೆಸ್ ನಾಯಕರ ಮನೆ ಮೇಲೆ ಪದೇ ಪದೇ ಧಾಳಿಯಾಗುತ್ತಿರುವುದರಿಂದ ಸಿದ್ದರಾಮಯ್ಯ ಕೇಂದ್ರಸರ್ಕಾರದ ವಿರುದ್ದ ಸಿಡಿಮಿಡಿಗೊಂಡರು. ಇಂದು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದೆ ಸಿದ್ದರಾಮಯ್ಯ ಕೇಂದ್ರಸರ್ಕಾರ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದೆ, ನಗದು ಅಪಮೌಲ್ಯ ಮಾಡಿದ್ದರಿಂದ ದೇಶಕ್ಕೆ ಯಾವುದೇ ರೀತಿಯ ಲಾಭವೂ ಆಗಿಲ್ಲ, ಕಪ್ಪು ಹಣವೂ ಹೊರಬಂದಿಲ್ಲ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಕೇಂದ್ರಸರ್ಕಾರ ಕಾಂಗ್ರೆಸ್ ಪ್ರಭಾವ ಇರುವ ಕಡೆಗಳಲ್ಲಿ ದಾಳಿಗಳನ್ನು ಮಾಡಿಸುತ್ತಿದೆ.

ನಗದು ಅಪಮೌಲ್ಯ ಮಾಡಿದ ನಂತರ ಅದೆಷ್ಟೋ ಮಂದಿ ಚಿನ್ನ ಹಾಗೂ ಭೂಮಿಯನ್ನು ಖರೀದಿಸಿದ್ದಾರೆ ಆದರೆ ಅದರ ಬಗ್ಗೆ ಇದುವರೆಗೆ ತನಿಖೆಯಾಗಿಲ್ಲ, ಅಂತಹವರ ಮನೆ ಮೇಲೆ ಧಾಳಿಯೂ ಆಗಿಲ್ಲ . ಕೇವಲ ಕಾಂಗ್ರೆಸ್ಸಿಗರ ಮನೆ ಮೇಲೆ ಧಾಳಿ ಮಾಡುತ್ತಿದ್ದಾರೆ ಎಂದು ಕೇಂದ್ರಸರ್ಕಾರದ ವಿರುದ್ದ ತಮ್ಮ ಕೋಪವನ್ನು ಹೊರಹಾಕಿದರು. ಬರ ಪರಿಹಾರಕ್ಕೂ ನಾವು ಕೇಳಿದಷ್ಟು ಹಣವನ್ನು ನೀಡದೆ ಕೇಂದ್ರಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು. 
loading...

No comments