Breaking News

ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪಳನಿಸ್ವಾಮಿ ಪ್ರಮಾಣ ವಚನ




ತಮಿಳುನಾಡು : ಕಳೆದ ಕೆಲವು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಡೊಂಬರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ .ಬಹುಮತ ಸಾಬೀತುಪಡಿಸುವಂತೆ ಪಳನಿಸ್ವಾಮಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಆಹ್ವಾನಿಸಿದ್ದರು .ಅದರಂತೆ ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಎಡಪ್ಪಾಡಿ ಪಳನಿಸ್ವಾಮಿ 124 ಶಾಸಕರ ಬೆಂಬಲದ ಪತ್ರವನ್ನು ನೀಡಿದ್ದಾರೆ.ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ  ಪಳನಿಸ್ವಾಮಿ ಜತೆಗೆ ಜೊತೆ 31 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ .ಈ ಎಲ್ಲಾ ಬೆಳವಣಿಗೆಯಿಂದ AIADMK  ಇಂದ ಬಂಡಾಯವೆದ್ದ ಪನ್ನೀರ್ ಸೆಲ್ವಂ ಅವರ ಮುಖ್ಯಮಂತ್ರಿ ಕನಸು ಭಗ್ನವಾಗಿದೆ 
loading...

No comments