Breaking News

ನಿಮ್ಮ ಹೃದಯದ ಬಗ್ಗೆ ಒಂದಿಷ್ಟು ಮಾಹಿತಿ


ಹೃದಯ ರೋಗ ಬಂದರಂತೂ ಅಂತಿಮ ಹಂತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಎಂದು ತಜ್ನ ಡಾಕ್ಟರರುಗಳು ತೀರ್ಮಾನಿಸಿಬಿಡುತ್ತಾರೆ. ವಿವಿಧ ಬಗೆಯ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯೇ ಅಂತಿಮ ಎನ್ನುವ ಅಭಿಪ್ರಾಯವನ್ನು ರೋಗಿಗಳ ತಲೆಗೆ ತುರುಕುತ್ತಾರೆ.
"ನೀವು ಅಸ್ಪತ್ರೆಗೆ ಬಂದಿದ್ದೇ ಅದೃಷ್ಟ, ಕಂಡಿಷನ್ ಕ್ರಿಟಿಕಲ್ ಆಗಿದೆ. ಆಪರೇಷನ್ ಮಾಡಲೇಬೇಕು" ಎಂದು ರೋಗಿ, ಮತ್ತವರ ಸಂಬಂಧಿಕರನ್ನು ಹೆದರಿಸಲಾಗುತ್ತದೆ.
ಕೊಬ್ಬು ಒಂದೇ ದಿನ ಕಟ್ಟಿಕೊಳ್ಳುವುದಿಲ್ಲ. ಹಲವು ವರ್ಷದಲ್ಲಿ ಈ ಕ್ರಿಯೆ ನಡೆಯುತ್ತದೆ. ರಕ್ತದಲ್ಲಿ ಹೆಚ್ಚುವ ಕೊಬ್ಬಿನ ಅಂಶದಿಂದ ಬರುವ ಹೃದಯ ರೋಗವನ್ನು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ನಿಯತ್ರಿಸಬಹುದು ಎನ್ನುತ್ತಾರೆ ದೆಹಲಿಯ ಖ್ಯಾತ ಹೃದಯ ರೋಗ ತಜ್ನ ಡಾ. ಬಿಮಲ್ ಚಜರ್.
ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಹೃದಯ ರೋಗದಲ್ಲಿ ಐ. ಟಿ. ಯಂತೆ ಭಾರತವೇ ಮುಂಚೂಣಿ. ಡಾ. ಬಿಮಲ್ ಅಭಿಪ್ರಾಯ ಪಾಶ್ಚಾತ್ಯ ವೈದ್ಯ ಪದ್ಧತಿಗೆ ಅಂಟಿಕೊಂಡವರಿಗೆ ವಿಚಿತ್ರ ಎನಿಸಬಹುದು. ಆದರೆ ಇವರ ಅನುಭವದ ಮೂಸೆಯಿಂದ ಬರುವ ಮಾತು ಹಾಗೂ ಇವರ
’ಟ್ರಾಕ್ ರೆಕಾರ್ಡ್’ ಗಮನಿಸಿದರೆ ದಾ. ಬಿಮಲ್ ಮಾತನ್ನು ಪಾಲಿಸುವುದೇ ಉತ್ತಮ ಎನಿಸುತ್ತದೆ.
ಮಾತ್ರೆಗಳನ್ನು ಕೊಡುವ ಬದಲು ರೋಗಿಗೆ ಕೊಬ್ಬು ಶೇಖರಣೆ ಕಡಿಮೆಯಾಗಲು ಜೀವನ ವಿಧಾನ ಬದಲಿಸಿ ಎಂದು ಹೇಳಿದರೆ ಅನುಕೂಲವಾಗುತ್ತದೆ. ಇದನ್ನು ಬಹುತೇಕ ಅಲೋಪಥಿ ವೈದ್ಯರು ಸೂಚಿಸುವುಧಿಲ್ಲ. ಆದ್ದರಿಂದ ಆಧುನಿಕ ಅಲೋಪಥಿ ವೈದ್ಯ ಪದ್ಧತಿಯಿಂದ ಈ ರೋಗವನ್ನು ಗುಣಪಡಿಸಲು ಸಾಧ್ಯವಾಗಲ್ಲ ಎಂದುಕೊಂಡರು. ಇದಕ್ಕೆ ಉತ್ತರ ಹುಡುಕುತ್ತಿದ್ದಾಗ ಅವರಿಗೆ ’ದಿ ಲಾನ್ಸೆಟ್’ ಎನ್ನುವ ವೈದ್ಯಕೀಯ ಪತ್ರಿಕೆಯಲ್ಲಿ ಅಮೇರಿಕದ ಟೆಕ್ಸಾಸ್ ಹೃದಯ ಕೇಂದ್ರದ ಡಾ. ಡೀನ್ ಆರ್ನಿಷ್ ಅವರ ಲೇಖನ ಗಮನ ಸೆಳೆಯಿತು. ಅವರು ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕರೋನರಿ ಆರ್ಟರಿಗಳಲ್ಲಿ ಕಟ್ಟಿದ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಬಗ್ಗೆ ತಿಳಿಸಿದ್ದರು. ಸಾಮಾನ್ಯವಾಗಿ ಅನಾವಶ್ಯವಾಗಿ ಎಣ್ಣೆ,ಬೆಣ್ಣೆ ತಿನ್ನುವ ವ್ಯಕ್ತಿಗೆ ವರ್ಷಕ್ಕೆ ಶೇ. ೨ರ ಪ್ರಮಾಣದಲ್ಲಿ ಕೊಬ್ಬು ರಕ್ತನಾಳದಲ್ಲಿ ಶೇಖರಣೆಯಾಗುತ್ತಿದೆ. ಒಬ್ಬ ವ್ಯಕ್ತಿ ಓಡಲು ಶೇ. ೩೦, ನಡೆದಾಡಲು ಶೇ. ೨೦, ಹಾಗೂ ಆರಾಮವಾಗಿ ಇರಲು ಶೇ. ೧೦ ರಷ್ಟು ರಕ್ತನಾಳ ರಕ್ತ ಚಲನೆಗೆ ತೆರೆದಿದ್ದರೆ ಸಾಕು ಎನ್ನುವುದು ಡಾ. ಬಿಮಲ್ ಅಭಿಪ್ರಾಯ. ರಕ್ತನಾಳದಲ್ಲಿ ಶೇ.೭೦ ಕ್ಕಿಂತ ಹೆಚ್ಚು ಕೊಬ್ಬು ಶೇಖರಣೆಯಾದರೆ ಹೃದಯ ತೊಂದರೆ ಕಾಣಿಸಿಕೊಳ್ಳುತ್ತದೆ.
ರಕ್ತನಾಳದಲ್ಲಿ ಶೇ. ೮೦ ರಿಂದ ೧೦೦ ರಷ್ಟು ಕೊಬ್ಬು ಶೇಖರಣೆಯಾಗಲು ೧೦ ವರ್ಷಗಳಾದರೂ ಬೇಕಾಗುತ್ತದೆ. ಆದರೆ ಕೊಬ್ಬಿನ ಮೇಲ್ಪದರ ಒಡೆದರೆ ರಕ್ತ ಹೆಪ್ಪುಗಟ್ಟಿ ಹೃಧಯಾಘಾತ ಖಂಡಿತ.
ರಕ್ತಸಂಚಾರ ಸರಾಗವಾಗಲು ಬಲೂನ್ ಆಂಜಿಯೋಪ್ಲಾಸ್ಟಿ ಹೆಚ್ಚಾಗಿದೆ. ಐದು ನಿಮಿಷದ ಚಿಕಿತ್ಸೆಗೆ ೧. ೫ ಲಕ್ಷ ರೂಪಾಯಿ ಖರ್ಚು. ಇದೇನು ಹೃದಯ ತೊಂದರೆಗೆ ಶಾಶ್ವತ ಪರಿಹಾರವಲ್ಲ ಎನ್ನುವುದು ಡಾ. ಬಿಮಲ್ ಅವರ ಅಭಿಪ್ರಾಯ. ಹೃದಯ ತೊಂದರೆಗಳಿಂದ ದೂರವಾಗಲು ಡಾ. ಬಿಮಲ್ ಹದಿನೆಂಟು ಪುಸ್ತಕಗಳನ್ನು ಹೊರತಂದಿದ್ದಾರೆ.
ಇದರಲ್ಲಿ ’ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಫ಼ುಡ್ ಫಾರ್ ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಅಡುಗೆ ಪುಸ್ತಕಗಳಾದ ’ಜೀರೋ ಆಯಿಲ್ ಕುಕ್ ಬುಕ್, ಜೀರೋ ಆಯಿಲ್ ಸ್ನಾಕ್ಸ್, ಜೀರೋ ಆಯಿಲ್ ಸ್ವೀಟ್ಸ್, ೨೦೦೧ ಡಯಟ್ ಟಿಪ್ಸ್ ಫಾರ್ ಹಾರ್ಟ್ ಡಿಸೀಸ್.
ಆಹಾರದಲ್ಲಿ ಎಣ್ಣೆ, ತುಪ್ಪ ಬಳಸಲೇಬೇಕಿಲ್ಲ. ಆರೋಗ್ಯಕ್ಕೆ ಉತ್ತಮ ಎನ್ನುವ ಎಣ್ಣೆಯೇ ಇಲ್ಲ.
ಇದೆಲ್ಲಾ ಬರೀ ಮಾರಾಟ ತಂತ್ರ. ಇದರ ಬದಲು ನೀರಲ್ಲೇ ಬೇಯಿಸಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಎಂದು ಸಲಹೆ ನೀಡುವರು.
 -  ಸತ್ಯ ಹನಸೋಗೆ
loading...

No comments