Breaking News

ಬಿನ್ನಕೋಮು ಜೋಡಿ ಪ್ರೇಮ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ



ಶಿರ್ವದಲ್ಲಿ ನೈತಿಕ ಪೊಲೀಸ್ ಗಿರಿ
Suddi24×7.in :- ಉಡುಪಿ ಸದಾ ಶಾಂತಿ ಸೌಹಾರ್ದತೆಯಿಂದ ಇರುವ ದೇವರ ನಾಡು ಇದೀಗ ಇಲ್ಲಿ ದುಷ್ಕರ್ಮಿಗಳು ನೈತಿಕ ಪೊಲೀಸ್ ಗಿರಿ ನಡೆಸಿ ಯುವಕನೊಬ್ಬನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಶಿರ್ವ ಸಮೀಪ ವರದಿ ಆಗಿದೆ.

ಘಟನೆ ವಿವರ :
ಕಳೆದ ರಾತ್ರಿ ಸೈಂಟ್ ಅಲೋಶಿಯಸ್ ಚರ್ಚ್ ಇಲ್ಲಿನ ವಾರ್ಷಿಕ ಹಬ್ಬ ನೋಡಲು ಕಟಪಾಡಿ ಮೂಲದ ಯುವಕ ಚೇತನ್(21) ಹೊಗಿದ್ದು ಅಲ್ಲಿ ತಾನು ಎರಡು ವರ್ಷದಿಂದ ಪ್ರೀತಿಸುತ್ತಾ ಇದ್ದ ಪ್ರೇಯಸಿ ಜೊತೆ ಸೇರಿ ಸುತ್ತಾಡಿದ್ದರು. ಯುವತಿ ಅನ್ಯ ಕೋಮಿನವಳು ಆಗಿದ್ದು. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದವಳಾಗಿದ್ದು ಯುವತಿಯ ಮನೆಯವರಿಂದ ಇವರಿಬ್ಬರ ಪ್ರೇಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನೆಲ್ಲ ಲೆಕ್ಕಿಸದೆ ಜೋಡಿ ಶಿರ್ವ ಸೈಂಟ್ ಅಲೋಶಿಯಸ್ ಚರ್ಚ್‌ನ ವಾರ್ಷಿಕ ಹಬ್ಬದ ದಿನ ಒಂದಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಯುವತಿ ಮನೆಯವರು ಚೇತನ್ ಮೇಲೆ ಏಕಾ ಏಕಿ ಹಲ್ಲೆ ನಡೆಸಲು ಮುಂದಾದ ಸಂದರ್ಭದಲ್ಲಿ ಯವಕ ಕೂಡ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಇದೇ ಸಂದರ್ಭದಲ್ಲಿ ಅಲ್ಲೆ ಇದ್ದ 15 ಮುಸ್ಲಿಂ ಯುವಕರ ಗುಂಪು ಒಂದು ಚೇತನ್ ಮೇಲೆ ಮುಗಿ ಬಿದ್ದು ದೊಣ್ಣೆ ಮತ್ತು ಮಾರಕಸ್ತ್ರಾಗಳಿಂದ ಹಲ್ಲೆ ನಡೆಸಿದೆ. ನಂತರದ ಬೆಳವಣಿಗೆಯಲ್ಲಿ ಯುವಕನ ಸ್ನೇಹಿತರು ಗಾಯಲು ಚೇತನ್ ಅನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ

loading...

No comments