Breaking News

ತಮಿಳುನಾಡಿನಲ್ಲಿ ಕುತೂಹಲ ಕೆರಳಿಸಿತು ಕಣ್ಣಿರ ರಾಜಕಾರಣ !


ತಮಿಳುನಾಡು : ತಮಿಳುನಾಡಿನಲ್ಲಿ ಸರಕಾರ ರಚಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಜತೆ ಜಿದ್ದಾಜಿದ್ದಿಗೆ ಇಳಿದಿರುವ ಹಂಗಾಮಿ ಮುಖ್ಯಮಂತ್ರಿ ಪನ್ನಿರ್‌ ಸೆಲ್ವಂ ಅವರ ಸಂಖ್ಯಾಬಲ ಭಾನುವಾರ ಮತ್ತಷ್ಟು ಏರಿಕೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಶಶಿಕಾಲ ಭಾಷಣದ ಮಧ್ಯೆ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ ಅವರು, ನಮ್ಮ ಪಕ್ಷವನ್ನು ಯಾರೊಬ್ಬರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂಬ ಜಯಲಲಿತಾ ಅವರ ಮಾತನ್ನು ನೀವೆಲ್ಲ ಉಳಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.

''ಅಮ್ಮಾ ಅವರ ಭಾವಚಿತ್ರದ ಮುಂದೆ ನಾನು ಈ ಪ್ರಮಾಣ ಮಾಡುತ್ತಿದ್ದೇನೆ, ನಾವು ಅಧಿಕಾರವನ್ನು ಹಿಡಿಯಲಿದ್ದೇವೆ. ನೀವೆಲ್ಲರೂ ನನ್ನೊಂದಿಗೆ ಪ್ರತಿಜ್ಞೆ ಸ್ವೀಕರಿಸಬೇಕು, ಮರೀನಾ ಬೀಚ್‌ನಲ್ಲಿರುವ ಜಯಾ ಅವರ ಸಮಾಧಿಯ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದ ಬಳಿಕ ಅಧಿಕಾರ ಸ್ವೀಕಾರ ಮಾಡೋಣ,'' ಎಂದು ಹೇಳುತ್ತಾ ಶಶಿಕಲಾ ಭಾವುಕರಾದರು.

''ನಾವೆಲ್ಲ ಉನ್ನತ ಶಿಕ್ಷಣವನ್ನು ಪಡೆದವರಲ್ಲ. ಆದರೆ ಅಮ್ಮಾ ಅದನ್ನು ಪಡೆದಿದ್ದರು. ಆದಾಗ್ಯೂ ಅಮ್ಮಾ ನಿಮ್ಮೆಲ್ಲರಿಗೆ ತರಬೇತಿ ನೀಡಿದ್ದಾರೆ. ಆ ಕಾರಣದಿಂದಲೇ ಶಾಸಕರಾಗಲು ಸಾಧ್ಯವಾಗಿದೆ. ಇವೆಲ್ಲವನ್ನು ಅಮ್ಮಾ ಮಾಡಿದ್ದು ಎಂಬುದನ್ನು ಮರೆಯದಿರಿ. ನಿಮ್ಮೆಲ್ಲರನ್ನು ಹೇಗೆ ಮೇಲಕ್ಕೆತ್ತಿದರು ಎಂಬುದನ್ನು ಮರೆಯಬೇಡಿ,'' ಎಂದು ಚಿನ್ನಮ್ಮ ಮನವಿ ಮಾಡಿಕೊಂಡರು.

''ಈಗಲೂ ನಾನು ಅಮ್ಮನ ಬಗ್ಗೆ ಯೋಚಿಸಿದಾಗಲೆಲ್ಲ ಕಣ್ಣೀರು ಹಾಕುತ್ತೇನೆ. ಅವರು ಮತ್ತು ನೀವೆಲ್ಲ ನನಗೆ ನೀಡಿದ ದೊಡ್ಡ ಜವಾಬ್ದಾರಿಯನ್ನು ನಾನು ನೆನೆಯುತ್ತೇನೆ,'' ಎಂದು ಹೇಳುತ್ತಾ ಕರವಸ್ತ್ರದಿಂದ ಒತ್ತರಿಸಿಬಂದ ಕಣ್ಣೀರನ್ನು ಒರೆಸಿಕೊಂಡರು.

loading...

No comments