Breaking News

ಗೋವಾ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನೆಡೆ


ಕೇಜ್ರಿವಾಲ್ ಕನಸು ಭಂಗ
ನವದೆಹಲಿ:  ಪಂಜಾಬ್ ಮತ್ತು ಗೋವಾದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ಪಣ ತೊಟ್ಟಿದ್ದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನೆಡೆಯಾಗಿದೆ.

ಸದ್ಯಕ್ಕೆ ಗೋವಾದಲ್ಲಿ ಬಂದಿರುವ ಮತ ಎಣಿಕೆ ಪ್ರಕಾರ ಪಕ್ಷವು ಯಾವುದೇ ಸ್ಥಾನ ಗೆಲ್ಲದೆ ಹೀನಾಯ ಸೋಲನುಭವಿಸುವುದು ಖಚಿತವಾಗಿದೆ. ಪಂಜಾಬ್‌ನಲ್ಲಿ ಕೆಲ ಸಮೀಕ್ಷೆಗಳು ಆಮ್ ಆದ್ಮಿಗೆ ಗೆಲುವು ಸಿಗುತ್ತದೆ ಅಂದಾಜಿಸಿದ್ದವು. ಆದರೆ, ಮತ ಎಣಿಕೆ ವೇಳೆ ಈ ಊಹೆ ಉಲ್ಟಾ ಆಗಿದೆ.

ದೆಹಲಿಯಲ್ಲಿ ಅಧಿಕಾರ ಹಿಡಿದು ಆಡಳಿತ ನಡೆಸಿದ್ದ ಆಮ್ ಆದ್ಮಿ ಪಕ್ಷವು ಇತರ ರಾಜ್ಯಗಳಲ್ಲೂ ಅಧಿಕಾರ ಹಿಡಿಯುವ ಅತೀವ ಆತ್ಮವಿಶ್ವಾಸವನ್ನು ಹೊಂದಿತ್ತು. ಪಂಜಾಬ್‌ನಲ್ಲಂತೂ ಅಧಿಕಾರಕ್ಕೆ ಬರುವ ಬಗ್ಗೆ ಇನ್ನಿಲ್ಲದ ಪ್ರಚಾರ ನಡೆಸಿತ್ತು. ಆದರೆ, ಅಲ್ಲಿ ಕಾಂಗ್ರೆಸ್ ಜಯಭೇರಿ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ಪಂಚ ರಾಜ್ಯ ಚುನಾವಣೆಯಲ್ಲಿ ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ತೀವ್ರ ಹಣಾಹಣಿ ನಡೆಸಿದ್ದ ಆಮ್ ಆದ್ಮಿ ಮುಖ್ಯಸ್ತ ಅರವಿಂದ ಕೇಜ್ರಿವಾಲ್ ಅವರು ಫಲಿತಾಂಶದಿಂದ ತೀವ್ರ ನಿರಾಸೆ ಹೊಂದಿದ್ದಾರೆ.
loading...

No comments