Breaking News

ವಿವಾದಿತ ಬುದ್ದಿ ಜೀವಿ ಯೋಗೀಶ್ ಮಾಸ್ಟರ್ ಮೇಲೆ ಮಸಿ ಎರಚಿ ಹಲ್ಲೆ


ದಾವಣಗೆರೆ: ಸದಾ ಮಾಧ್ಯಮಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ  ಬುದ್ದಿ ಜೀವಿ ಯೋಗೀಶ್ ಮಾಸ್ಟರ್ ಮೇಲೆ ದುಷ್ಕರ್ಮಿಗಳು ಮಸಿ ಎರಚಿದ ಘಟನೆ ವರದಿ ಆಗಿದೆ .   ಜಿಲ್ಲೆಯಲ್ಲಿ  ಸಾಹಿತಿ ಪಿ.ಲಂಕೇಶ್ ಅವರ ಜನ್ಮ ದಿನಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ  ದುಷ್ಕರ್ಮಿಗಳು ಸಾಹಿತಿ ಯೋಗೀಶ್ ಮಾಸ್ಟ'ರ್ ಅವರ ಮೇಲೆ ಕಪ್ಪು ಮಸಿ ಎರಚಿದ್ದಾರೆ. ಸ್ನೇಹಿತರೊಂದಿಗೆ ಹೊರಗಡೆ ಟೀ ಕುಡಿಯಲು ತೆರಳುತ್ತಿದ್ದಾಗ ಪುಸ್ತಕ ನೋಡುವ ನೆಪದಲ್ಲಿ ಮಾತನಾಡಿಸಿ ಮಸಿ ಎರಚಿ ನಂತರ ಹಲ್ಲೆ ಮಾಡಿ ಪರಾರಿಯಾದರು. 'ಹೋಗುವಾಗ ಭಲೋ ಭಾರತ್ ಮಾತಾಕೀ ಜೈ ಎಂದು ಕೂಗುತ್ತಿದ್ದರು' ಎಂದು ಯೋಗೀಶ್ ಮಾಸ್ಟರ್ ತಿಳಿಸಿದ್ದಾರೆ.
loading...

No comments