Breaking News

ಶ್ರೀರಾಮ ರಥಕ್ಕೆ ಚಪ್ಪಲಿ ಎಸೆದ ಅನ್ಯಕೋಮಿನ ಯುವಕ


ಕೋಮು ಸೌಹಾರ್ದತೆಯ ಭಂಗಕ್ಕೆ ಯತ್ನ

ಉತ್ತರ ಕನ್ನಡ : ರಾಮನವಮಿ ಪ್ರಯುಕ್ತ ಕೊಲ್ಲೂರಿನಿಂದ ಕುಮಟಾಗೆ ಆಗಮಿಸಿದ್ದ ಶ್ರೀರಾಮ ರಥದ ಮೇಲೆ ಅನ್ಯಕೋಮಿನ ಯುವಕನೊಬ್ಬ ಶ್ರೀರಾಮ ರಥಕ್ಕೆ ಚಪ್ಪಲಿ ಎಸೆದು ಎಂಜಲು ತೂರಿದ ಘಟನೆ ನಿನ್ನೆ ರಾತ್ರಿ  ವರದಿ ಆಗಿದೆ  .ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ .ರಥಯಾತ್ರೆಯಲ್ಲಿ ಹಲವಾರು ಸಾರ್ವಜನಿಕರು ಪಾಲ್ಗೊಂಡಿದ್ದು ರಾಮ ರಥ ಮಸೀದಿ ಸಮೀಪ ಬರುತ್ತಿದ್ದಂತೆ ಕೋಮು ಸೌಹಾರ್ದತೆಗೆ ದಕ್ಕೆ ತರುವ ನಿಟ್ಟಿನಲ್ಲಿ ಅನ್ಯಕೋಮಿನ ಯುವಕ ಈ ದುಷ್ಕ್ರತ್ಯವನ್ನು ಎಸಗಿದ್ದಾನೆ ಎಂದು ಹೇಳಲಾಗಿದೆ .


ಘಟನೆ ಸಂಬಂಧ ಶುಕ್ರವಾರ ರಾತ್ರಿ ೮ ಗಂಟೆಯ ವೇಳೆ ಠಾಣೆಗೆ ಯುವಕರ ಗುಂಪು ಒಂದು ಪೊಲೀಸ್ ಠಾಣೆಗೆ  ಮುತ್ತಿಗೆ ಹಾಕಿ ಕೋಮು ಗಲಭೆಗೆ ಯತ್ನಿಸಿದ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ .ಬಂಧಿತ ಯುವಕ ಈ ಹಿಂದೆ   ಮುರೂರು ಗುಡ್ಡದ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



loading...

No comments