Breaking News

ಮಂಗಳೂರಿನಲ್ಲಿ ಐಶ್ವರ್ಯ ರೈ



ಮಂಗಳೂರು:  ತಂದೆಯ ಅಸ್ಥಿ ವಿಸರ್ಜನೆ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಇಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿ ತಂದೆ ಉತ್ತರ ಕ್ರಿಯೆ ಪಾಲ್ಗೊಂಡರು.ಮುಂಬೈನಿಂದ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ನಟಿಗೆ ಪುತ್ರಿ ಆರಾಧ್ಯ, ತಾಯಿ ಹಾಗೂ ಕುಟುಂಬದ ಇತರ ಸದಸ್ಯರು ಸಾಥ್ ನೀಡಿದರು.    ಉಪ್ಪಿನಂಗಡಿಯ ಸಂಗಮ ಕ್ಷೇತ್ರದ ಸಹಸ್ರ ಲಿಂಗೇಶ್ವರ ದೇಗುಲದ ನೇತ್ರಾವತಿ ಕುಮಾರಧಾರೆ ನದಿಯಲ್ಲಿ ಐಶ್ವರ್ಯ ಅವರು ತಮ್ಮ ತಂದೆ ಕೃಷ್ಣ ರೈ ಅವರ ಅಸ್ತಿ ವಿಸರ್ಜನೆ ನೆರವೇರಿಸಿದರು.   ಕಳೆದ ವಾರವಷ್ಟೇ ಮುಂಬೈಯಲ್ಲಿ ಅನಾರೋಗ್ಯದಿಂದ ಕೃಷ್ಣ ರೈ ನಿಧನ ಹೊಂದಿದ್ದರು.


loading...

No comments