Breaking News

ನಕ್ಸಲರ ಹುಟ್ಟಡಗಿಸುತ್ತೇವೆ ರಾಜನಾಥ್ ಸಿಂಗ್‌



ನವದೆಹಲಿ :  ನಕ್ಸಲರ ಹುಟ್ಟಡಗಿಸಲು ಏನು ಬೇಕು ಹೇಳಿ, ಹೆಚ್ಚುವರಿ ಯೋಧರು, ತಾಂತ್ರಿಕ ನೆರವು, ಹೆಚ್ಚಿನ ಸಂಪನ್ಮೂಲ ಹೀಗೆ ಎಲ್ಲವನ್ನೂ ನೀಡುತ್ತೇನೆ. ನನಗೆ ಫಲಿತಾಂಶ ಕೊಡಿ ಇದು ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್‌ರವರು ಭದ್ರತಾ ಪಡೆಗಳಿಗೆ ಹೇಳಿರುವ ಖಡಕ್ ಮಾತು.

ನಕ್ಸಲರ ದಾಳಿಯಿಂದ ಗಾಯಗೊಂಡಿರುವ ಸಿ.ಆರ್.ಪಿ.ಎಫ್. ಯೋಧರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರ ಹುಟ್ಟಡಗಿಸಲು ಈಗಿನ ಕಾರ್ಯತಂತ್ರ ಬದಲಾವಣೆ ಮಾಡಲಿದೆ. ಮುಂದಿನ ದಿನಗಳಲ್ಲಿ ನಕ್ಸಲರ ಮೇಲೆ ಭದ್ರತಾ ಪಡೆಗಳು ಮುಗಿ ಬೀಳಲಿವೆ. ಕೆಲವೇ ವಾರಗಳಲ್ಲಿ ನಕ್ಸಲರಿಗೆ ಪ್ರತ್ಯುತ್ತರವನ್ನು ಭದ್ರತಾ ಪಡೆಗಳು ನೀಡಲಿವೆ ಎಂದರು.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿ.ಆರ್.ಪಿ.ಎಫ್. ಯೋಧರ ದಾಳಿ, ಹತ್ಯೆಗಳನ್ನು ತಡೆಯಲು ಅಗತ್ಯವಿರುವ ಕಾರ್ಯತಂತ್ರ ರೂಪಿಸಿ, ಈಗಿರುವ ಕುಂದುಕೊರತೆಗಳು, ಲೋಪದೋಷಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಿ ಎಂದ ಅವರು, ಗೃಹ ಸಚಿವಾಲಯದ ಭದ್ರತಾ ಸಲಹೆಗಾರ ಕೆ. ವಿಜಯಕುಮಾರ್, ಸಿ.ಆರ್.ಪಿ.ಎಫ್. ಹಂಗಾಮಿ ಮಹಾನಿರ್ದೇಶಕ ಸುದೀಪ್ ಲಕ್ತಕಿಯಾ ಹಾಗೂ ಛತ್ತೀಸ್‌ಗಡ ಮುಖ್ಯಮಂತ್ರಿ ಜತೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದರು ಎನ್ನಲಾಗಿದೆ.


loading...

No comments