Breaking News

ಶೋಭಾ ಕರಂದ್ಲಾಜೆ ಮದುವೆಯಾಗಲಿ ದಿನೇಶ್ ಗುಂಡೂರಾವ್ ತಿರುಗೇಟು



ಬೆಂಗಳೂರು : 'ಶೋಭಾ ಕರಂದ್ಲಾಜೆ ಅವರಿಗಿನ್ನೂ ಮದುವೆಯಾಗಿಲ್ಲ. ಮದುವೆಯಾಗಲು ಇನ್ನೂ ಅವಕಾಶವಿದೆ. ಬೇಕಾದರೆ ಅವರು ಮದುವೆಯಾಗಲಿ' ಎಂದು ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಶೋಭಾ ಕರಂದ್ಲಾಜೆ, 'ಕೆಪಿಸಿಸಿ ಕಾರ್ಯಾಧ್ಯಕ್ಷರೇನು ದಲಿತರ ಮನೆಯ ಹೆಣ್ಣು ತಂದಿದ್ದಾರೆಯೇ. ಅವರು ಯಾರನ್ನು ಮದುವೆಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಶೋಭಾ ಕರಂದ್ಲಾಜೆ  ಹೇಳಿದ್ದರು.

ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಖಾರವಾಗಿ ರಿಯಾಕ್ಟ್ ಮಾಡಿ, 'ನನ್ನ ಮದುವೆಯಾಗಿ 22 ವರ್ಷಗಳು ಕಳೆದಿವೆ ಈಗ ಯಾಕೆ ಅವರು ನನ್ನ ಮದುವೆ ಬಗ್ಗೆ ಮಾತನಾಡುತ್ತಾರೆ?
ಶೋಭಾ ಕರಂದ್ಲಾಜೆಗಿನ್ನೂ ಮದುವೆಯಾಗಿಲ್ಲ. ಬೇಕಾದರೆ ಅವರೇ ನೋಡಿಕೊಂಡು ಮದುವೆ ಆಗಲಿ. ನಾನು ಯಾರನ್ನು ಮದುವೆಯಾಗಿದ್ದೇನೆಂದು ಇಡೀ ರಾಜ್ಯಕ್ಕೆ ಗೊತ್ತು. ನಾನೊಬ್ಬ ಹಿಂದೂ ನಾನು ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದೇನೆ.

ಅದರಲ್ಲಿ ತಪ್ಪೇನಿದೆ? ಅದರ ಬಗ್ಗೆ ಅವರು ಯಾಕೆ ಮಾತನಾಡಬೇಕು? ಅದರ ಹಿಂದಿನ ಉದ್ದೇಶ ಏನು? ಆಗ ದಲಿತ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಮದುವೆಯಾಗುತ್ತಿದ್ದೆ ನನಗೇನು ಜಾತಿ ಎಂಬ ಬೇದ ಭಾವ ಇಲ್ಲ, ಅದರಲ್ಲಿ ತಪ್ಪು ಕೂಡಾ ಇಲ್ಲ.

ಅವರಿಗಿನ್ನೂ ಅವಕಾಶ ಇದೆ.' ಅಂತ ತಿರುಗೇಟು ಕೊಟ್ಟಿದ್ದಾರೆ.

No comments