Breaking News

ಶೋಭ ಕರಂದ್ಲಾಜೆ ಅಪ್ಪನ ಆಸ್ತಿ ಎಷ್ಟಿತ್ತು ಶೋಭನ ಆಸ್ತಿ ಎಷ್ಟಿದೆ ಬಹಿರಂಗ ಪಡಿಸಲಿ ರಾಮನಾಥ ರೈ ಸವಾಲು



ಮಂಗಳೂರು :- ರಾಜ್ಯಸರ್ಕಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಅನುದಾನ ಸ್ಥಗಿತ ಗೊಳಿಸಿದ ಹಿನ್ನಲೆಯಲ್ಲಿ ಬಿಜೆಪಿ ಸಂಸದೆ ಶೋಭ ಕರಂದ್ಲಾಜೆ ಭಿಕ್ಷೆ ಬೇಡಿ ಮಕ್ಕಳ ಊಟಕ್ಕೆ ಅನ್ನ ಕೋಡಿ ಎಂದು ಮನೆ ಮನೆಗೆ ಸಂಚಾರ ಮಾಡಿ ವಿನೂತನ ರೀತಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಇದ್ದಾರೆ .

ಈ ಸಂಭಂದ ಪ್ರವರ್ತಕರ ಪ್ರಶ್ನೆ ಗೆ ಉತ್ತರಿಸಿದ ಅರಣ್ಯ ಸಚಿವ ಹಾಗೂ ಬಂಟ್ವಾಳ ಉಸ್ತುವಾರಿ ಸಚಿವ ರಾಮನಾಥ ರೈ ಶೋಭ ಭಿಕ್ಷೆ ಬೇಡಿ ಮಕ್ಕಳಿಗೆ ಊಟ ಹಾಕುವ ಅಗತ್ಯವಿಲ್ಲ ಅವಳ ಮಡಿಕೇರಿಯಲ್ಲಿ ಇರುವ ಆಸ್ತಿಯು ಒಂದು ಭಾಗ ಮಾರಿದರೆ ಸಾಕು ಜೀವನ ಪರ್ಯಂತ ಆ ಮಕ್ಕಳಿಗೆ ಊಟ ಹಾಕಬಹುದು ಅವಳಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು ಅವಳ ಅಪ್ಪನಿಗೆ ಇದ್ದ ಆಸ್ತಿ ಎಷ್ಟು ಅವಳು ಮಾಡಿದ ಆಸ್ತಿ ಎಷ್ಟು ಎಲ್ಲಾ ಲೆಕ್ಕ ಕೊಡಲಿ ನಾನು (ರೈ) ಅಪ್ಪ ಮಾಡಿದ ಆಸ್ತಿಯನ್ನು ನಾವು ಕಳೆದುಕೊಂಡಿದ್ದೆವೆ ಎಂದರು .

ರೈ ಸವಾಲು ಹಾಕಿದ ವಿಡಿಯೋ ಇಲ್ಲಿದೆ


No comments