Breaking News

ಕೊನೆಗೂ ಬಯಲಾಯಿತ್ತು ಸಿವೋಟರ್ ಹಿಂದಿನ ಕರಾಳ ಸತ್ಯ !!



ಬೆಂಗಳೂರು :- ರಾಜ್ಯದಲ್ಲಿ  ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿಂದತೆ ರಾಜಕೀಯ ಪಕ್ಷಗಳ ಕೆಸರು ಎರಚಾಟ ಜೋರಾಗಿದೆ ಮತದಾರನ ಮನ ಒಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಆಡಳಿತ ಪಕ್ಷ ,ಹಾಗೂ ವಿರೋಧ ಪಕ್ಷಗಳು ತಮ್ಮ ಏಜೆನ್ಸಿ ಗಳ ಮೂಲಕ ಸರ್ವೆಗಳನ್ನು ನಡೆಸಿ ಜನರಲ್ಲಿ ಚಂಚಲತೆ ಮೂಡಿಸುತ್ತಾ ಇದ್ದಾರೆ .

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನನ್ನ ಅಭಿವೃದ್ಧಿ ಗಿಂತ ವಿವಾದಗಳ ಮೂಲಕವೆ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ ಇದರ ಭಯಕ್ಕೊ ಅಥವಾ ಜನರಲ್ಲಿ ಗೊಂದಲ ಮೂಡಿಸುವ ತಂತ್ರನೋ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರು ಬೇಟಿ ಮಾಡಿ ಹೋದ ನಂತರ ಒಮ್ಮೆಲೇ ಸಿವೋಟರ್ ಸಮೀಕ್ಷೆ ಬಿಡುಗಡೆ ಮಾಡಿಸಿದೆ.

ಕಳೆದ ಅಂದರೆ 20 ಆಗಸ್ಟ್ ರಂದು ಇದರ ಫಲಿತಾಂಶ ಬಿಡುಗಡೆಯಾಗಿದ್ದು ಆದರೆ ಬಿಡುಗಡೆ ಆದ ಮರು ಕ್ಷಣದಿಂದ ದ್ರಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದೆ ಕಾರಣ ಸಿವೋಟರ್ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆ ಬಹುಮತ ದೊರೆತ್ತಿದ್ದು ಕಾಂಗ್ರೆಸ್ ಮುಂದಿನ ಭಾರಿಯು ರಾಜ್ಯದ ಚೂಕ್ಕಾಣಿ ಹಿಡಿಯಲ್ಲಿದೆ ಎಂದು ಹೇಳಿದ್ದಾರೆ .

 ಸಿವೋಟರ್ ಸಮೀಕ್ಷೆ ಬಳಿಕ ಪರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲೆ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದೆ ಅಷ್ಟಕ್ಕೂ ಸಿವೋಟರ್ ಎಷ್ಟು ಜನರ ಸಮೀಕ್ಷೆ ನಡೆಸಿತ್ತು ಗೊತ್ತೆ ಕೇವಲ 25,000 ಜನರ ಸಮೀಕ್ಷೆ ನಡೆಸಿದ್ದರು ಅದರಲ್ಲಿ ಮುಸ್ಲಿಂ, ಕೈಸ್ತ,ಹಿಂದು ರಧರ್ಮ ಗುರುಗಳ ಸಮೀಕ್ಷೆ ಕೂಡ ಸೇರಿದೆ
ಇನ್ನೂ ವಿಪರ್ಯಾಸವೆಂದರೆ ಆರು ಕೋಟಿ ಜನ ಸಂಖ್ಯೆ ಇರುವ ಕರ್ನಾಟಕದಲ್ಲಿ ಕೇವಲ 25 ಸಾವಿರ ಮಂದಿಯ ತೀರ್ಪು ಅಂತಿಮ ಅಂತ ಸಮಿಕ್ಷೆ ಮಾಡಿ ಜನರ ಮಂದೆ ಇಟ್ಟು ಬೆತ್ತಲಾಗಿದ್ದಾರೆ ಎಂದು ಬುದ್ದಿಜೀವಿಗಳು ಕಿಡಿಕಾರಿದ್ದಾರೆ .

(ಏಜೆನ್ಸಿ)

No comments