Breaking News

ಕಂಪ್ಲಿ ಜನರಿಗೆ ಹಂಚಲು ತಂದಿದ್ದ ಬಿಜೆಪಿಯವರ ಸೀರೆ ಸೀಜ್

ಬಳ್ಳಾರಿಯಲ್ಲಿ ಮತದಾರರಿಗೆ ಹಂಚಲು ಬಿಜೆಪಿಯವರಿಂದ ಸಂಗ್ರಹಿಸಿದ್ದ 102 ಸೀರೆಗಳನ್ನು ಚುನಾವಣಾ ನೀತಿ ಸಂಹಿತೆ ತಂಡದವರು ಎರೆಡು ಕಡೆ ದಾಳಿ ಮಾಡಿ ವಶಪಡಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಶ್ರೀರಾಮರಂಗಾಪುರದಲ್ಲಿ 41 ಸೀರೆ ಮತ್ತು ನಂ.10 ಮುದ್ದಾಪುರ ಗ್ರಾಮದಲ್ಲಿ 61ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎಲ್ಲ ಸೀರೆಗಳು ಬಿಜೆಪಿ ಚಿಹ್ನೆ ಇರುವ ಚೀಲದಲ್ಲಿದ್ದ ಸಂಗ್ರಹಿಸಲಾಗಿತ್ತು.ಸೆಕ್ಟರ್ ಅಧಿಕಾರಿ ಧರ್ಮಣ್ಣ ಜಾಗೃತದಳ ಅಧಿಕಾರಿ ಶ್ರೀನಿವಾಸ್ ಅರವಿ, ಎಫ್.ಎಸ್.ಟಿ ರವಿಕುಮಾರ್, ಪಿಎಸ್‌ಐ ಶಾರವ್ವ ಡಿ, ದೊಡ್ಡಾಣಿ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ದಾಳಿ ನಡೆಸಿದ ತಂಡದಲ್ಲಿದ್ದರು.ನಂ.10 ಮುದ್ದಾಪುರದ ಪ್ರಕರಣ ಕಂಪ್ಲಿ ಠಾಣೆಯಲ್ಲಿ ಮತ್ತು ಶ್ರೀರಾಮರಂಗಾಪುರ ಪ್ರಕರಣ ಕುಡುತಿನಿ ಠಾಣೆಯಲ್ಲಿ ದಾಖಲಾಗಿದೆ.

No comments