Breaking News

ಹಿರಿಯಡ್ಕ ಜೈಲಿನಲ್ಲಿ ಗೋ ಕಳ್ಳರ ಮೇಲೆ ಹಲ್ಲೆ


ಉಡುಪಿ :  ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯಂಗಡಿ ಸಮೀಪ ನ.26ರಂದು ಬೆಳಗಿನ ಜಾವ ಸಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟದ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ಗಳಿಗೆ ಹಲ್ಲೆ ನಡೆಸಲು ಯತ್ನಿಸಿ ಕಾರು ಬಿಟ್ಟು ಪರಾರಿಯಾಗಿ ಬಳಿಕ ಪೊಲೀಸರಿಂದ ಬಂಧನಕ್ಕೆ ಒಳಗಾದ  ಕುಂದಾಪುರದ ಇರ್ಷಾದ್ ಹಾಗೂ ಕಾರ್ಕಳ ಬಂಗ್ಲೆಗುಡ್ಡೆಯ ರಫೀಕ್ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿರಿಯಡ್ಕ ಜೈಲಿನಲ್ಲಿ ಹಾಕಿದ್ದರು .
ಹಿರಿಯಡ್ಕ ಜೈಲಿನಲ್ಲಿ ನ.27ರಂದು ಮುಂಜಾನೆ ತಿಂಡಿ ತಿನಲ್ಲೂ ಹೋಗುವ ಸಮಯದಲ್ಲಿ ಗೋ ಕಳ್ಳರಾದ ಇರ್ಷಾದ್ ಮತ್ತು ರಫೀಕ್ ಮೇಲೆ ಹಿಂದೂ ಸಂಘಟನೆಗೆ ಸೇರಿದ ವಿಚಾರಣಾ ಕೈದಿಗಳು ಅಡ್ಡಗಟ್ಟಿ ಹಿಗ್ಗಾಮುಗ್ಗವಾಗಿ ಥಳಿಸಿದ್ದರು ಜೈಲು ಸಿಬ್ಬಂದಿಗಳ ಮಧ್ಯಂತರದಿಂದ ಅವರನ್ನು ಬಿಡಿಸಿ ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಿಲಾಯಿತು ,ಘಟನೆಯ ಗಂಭೀರತೆಯನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ವಿವರ ಪಡೆದರು ಎಂದು ತಿಳಿದು ಬಂದಿದೆ ನಂತರದ ಬೆಳವಣಿಗೆಯಲ್ಲಿ  ಹಿರಿಯಡ್ಕ ಪೊಲೀಸರು ಇರ್ಷಾದ್ ನೀಡಿದ ದೂರಿನಂತೆ ಸುದೀಪ್ ಶೆಟ್ಟಿ, ಅಖಿಲೇಶ್ ಶೆಟ್ಟಿ, ಸುಕುಮಾರ, ಮಂಜೇಶ್, ಪ್ರತೀಕ್, ಪ್ರಶಾಂತ ಮೊಗವೀರ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ 

No comments