Breaking News

ನೋಟು ನಿಶೇದಕ್ಕಿಂತ ಮೊದಲು ಜಮ್ಮು-ಕಾಶ್ಮೀರದಲ್ಲಿನ ಉಗ್ರವಾದ ನಿಶೇಧಿಸಿ - ಶಿವಸೇನೆ

ಮುಂಬೈ : ಕೇಂದ್ರ ಸರ್ಕಾರದ ನೋಟು ರದ್ದತಿ ಕ್ರಮದ ಕುರಿತು ಶಿವಸೇನೆ ನಾಯಕ ಸಂಜಯ್ ರಾವುತ್ ಪ್ರತಿಕ್ರಿಯಿಸುತ್ತಾ, ಕೇಂದ್ರ ಸರ್ಕಾರ ನೋಟು ನಿಶೇಧ ಮಾಡುವುದಕ್ಕಿಂತ ಮೊದಲು ಜಮ್ಮು ಕಾಶ್ಮೀರದಲ್ಲಿರುವ ಉಗ್ರವಾದವನ್ನು ನಿಶೇಧ ಮಾಡುವ ಅವಶ್ಯಕತೆ ಇತ್ತು ಎಂದು ಹೇಳಿದರು.
ಇದಕ್ಕಿಂತ ಮೊದಲು ಶಿವಸೇನೆ, ನೋಟು ನಿಶೇಧದಿಂದ ಬಡವರು ತುಂಬಾ ತೊಂದರೆಗೆ ಸಿಲುಕಿದ್ದಾರೆ, ಅದನ್ನು ವಾಪಾಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿತ್ತು. ಒಂದಾ ನೋಟು ನಿಶೇಧ ಕ್ರಮ ವಾಪಾಸ್ ಪಡೆಯಿರಿ ಇಲ್ಲವಾದರೆ ಮುಂದಾಗುವ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆಯನ್ನೂ ನೀಡಿತ್ತು.

No comments