Breaking News

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಹಾತೊರೆಯುತ್ತಿರುವ ಮಿಥುನ್ ರೈ


ಚುನಾವಣಾ ವರ್ಷ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು  ಟಿಕೆಟ್ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ ,ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಡಬಿದರೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಒಂದು ಹೆಜ್ಜೆ ಮುಂದೆ ಇದ್ದಾರೆ ,ಕ್ಷೇತ್ರದ ಯುವ ಪಿಡಿಯನ್ನು ತಮ್ಮತ್ತ ಸೆಳೆಯಲು ಟೊಂಕ ಕಟ್ಟಿ ನಿಂತು ನಿರಂತರ ಶ್ರಮಿಸುತ್ತಿದ್ದಾರೆ ,ಹಿಂದುತ್ವ ಮತ್ತು ಪ್ರಶಾಂತ್ ಪೂಜಾರಿಯ ಹೆಸರು ಹೇಳಿ ವೋಟ್ ಬ್ಯಾಂಕ್ ಸ್ರಷ್ಟಿಸಲು ಹೋರಾಟ ಬಿಜೆಪಿಗೆ ಸಡ್ಡು ಬಡಿಯಲು ಮೂಡಬಿದರೆ ಕ್ಷೇತ್ರದಲ್ಲಿ 75 ಬಡ ಕುಟುಂಬಗಳಿಗೆ ಗೋವುಗಳನ್ನು ದಾನ ಮಾಡಿ ಕಾಂಗ್ರೆಸ್ ನಲ್ಲಿ ವಿಭಿನ್ನ ನಾಯಕನಾಗಿ ಹೊರ ಹೊಮ್ಮಲು ಪ್ರಯತ್ನಿಸಿದ್ದಾರೆ ಮೂಡುಬಿದಿರೆ ವಲಯದ ಶಿರ್ತಾಡಿ, ಬೆಳುವಾಯಿ ಪುತ್ತಿಗೆ ಮುಂತಾದ ಕಡೆಗಳಲ್ಲಿ ಯುವಕರ ಗುಂಪನ್ನು ಸಂಪರ್ಕಿಸಿ ಸಂಘಟನೆ ಗೊಳಿಸಲು ಯತ್ನಿಸುತ್ತಿದ್ದಾರೆ ,ಮೂಡಬಿದರೆ ಶಾಸಕ ಅಭಯಚಂದ್ರ ಜೈನ ಅವರ ಮಂತ್ರಿಗಿರಿ ಹೋದ ನಂತರ ಮಿಥುನ್ ಅವರನ್ನು ಸ್ವತಃ ಅಭಯಚಂದ್ರ ಜೈನ ಅವರೇ ಕ್ಷೇತ್ರದ ಮುಂದಿನ ನಾಯಕನೆಂದು ಘೋಷಿಸಿ ಸಿದ್ದರಾಮಯ್ಯ ನವರಿಗೂ ಈ ವಿಷಯ ತಿಳಿಸಿದ್ದರು ,ಮಿಥುನ್ ರೈ ಅವರ ರಾಜಕೀಯ ಕಾರ್ಯವೈಖರಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಹಿರಿಯ ಕಾಂಗ್ರೆಸಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ .

No comments