Breaking News

ಕಾರ್ಕಳ ಬೈಲೂರಿನ s.c.d.c.c. ಬ್ಯಾಂಕಿನಲ್ಲಿ ಗೋಲ್ ಮಾಲ್ ?


ಕಾರ್ಕಳ :   ಬೈಲೂರಿನ s.c.d.c.c. ಬ್ಯಾಂಕಿನ ಶಾಖೆಯಲ್ಲಿ ಬ್ಯಾಂಕಿನ ಸಿಬ್ಬಂದಿ ಒಬ್ಬರು ಗ್ರಾಹಕರಿಗೆ ವಂಚನೆಗೈದ ಘಟನೆ ನಡೆದಿದೆ. ಗ್ರಾಹಕರು ಜಮೆ ಮಾಡಿದ ಹಣದಲ್ಲಿ ವಂಚನೆಗೈದ  ಬ್ಯಾಂಕ್ ಸಿಬ್ಬಂದಿ   ಎಲ್ಲರ ಖಾತೆಯ ಹಣ ಲಪಟಯಿಸಿ ಸುಮಾರು ೪ಲಕ್ಷ ಕ್ಕೂ ಹೆಚ್ಚು ಹಣವನ್ನು ಗುಳುಂ ಮಾಡಿದ್ದಾನೆ. ಇಂದು ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಬಂದ ಗ್ರಾಹಕರು ತಮ್ಮ ಖಾತೆಯಲ್ಲಿ ಜಮಾ ಆಗದಿರುವ ಹಣದ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದರು ಮತ್ತು ಬ್ಯಾಂಕ್ ನ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದರು ಎಂದು ತಿಳಿದು ಬಂದಿದೆ
ಬ್ಯಾಂಕ್ ನಲ್ಲಿ ಜಾಮಾಯಿಸಿರುವ ಗ್ರಾಹಕರ ಸಮಸ್ಯೆಯನ್ನು ನಿವಾರಿಸಲು ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಗುರುತಿಸಿಕೊಂಡ  ಕಿಶನ್ ಹೆಗ್ಡೆ ಅವರು ಮಧ್ಯಸ್ಥಿಕೆ ವಹಿಸಿ ವಂಚನೆಗೈದ ಹಣವನ್ನು ವಾಪಾಸು ಗ್ರಾಹಕರ ಖಾತೆಗೆ ಜಮಾ ಮಾಡಿಸುವುದಾಗಿ ಹೇಳಿದ್ದಾರೆ ಮತ್ತು ವಂಚನೆಗೈದ ಬ್ಯಾಂಕ್ ಸಿಬ್ಬಂದಿ ಮೇಲೆ ಸೂಕ್ತ  ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ

No comments