Breaking News

ಎಚ್ ವಿಶ್ವನಾಥ್ ಒಬ್ಬ ಹುಚ್ಚು ನಾಯಿ : ಪ್ರತಾಪ್ ಸಿಂಹ


ಮೈಸೂರ್ : ಕೇಂದ್ರ ಸರಕಾರ ಐನೂರು ಮತ್ತು ಸಾವಿರ ನೋಟ್  ಬ್ಯಾನ್ ಮಾಡಿರುವ ಬಗ್ಗೆ ಪ್ರಧಾನಿ ಮೋದಿ ಅವರನ್ನು ನಾಯಿ ಮರಿಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಎಚ್.ವಿಶ್ವನಾಥ್ ವಿರುದ್ಧ ಬಿಜೆಪಿ ಸಂಸದ  ಪ್ರತಾಪ್ ಸಿಂಹ  ಕಿಡಿಕಾರಿದ್ದಾರೆ 
ಕೆಲವು ದಿನಗಳ ಹಿಂದೆ ಎಚ್ ವಿಶ್ವನಾಥ್  ವಿಶ್ವನಾಥ್ ಹೀಗೆ ಹೇಳಿದ್ದರು 
 ಬಂಡಿಯ ನೆರಳಲ್ಲಿ ಬರುತ್ತಿರುವ ನಾಯಿಮರಿ ನಾನೇ ಬಂಡಿಯನ್ನು ಎಳೆಯುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿರುತ್ತದೆ. ಆದರೆ, ಎತ್ತಿನ ಬಂಡಿಯ ನೆರಳಲ್ಲಿ ನಡೆಯುತ್ತಿದ್ದೇನೆ ಎನ್ನುವ ಅರಿವಿರುವುದಿಲ್ಲ. ಅದರಂತೆ ನೋಟ್ ಬ್ಯಾನ್ ಮಾಡಿದ ಪ್ರಧಾನಿ ಮೋದಿ ಪರಿಸ್ಥಿತಿಯ ಇದೇ ರೀತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಎಚ್.ವಿಶ್ವನಾಥ್ ಲೇವಡಿ ಮಾಡಿದ್ದರು ,
ಈ ಬಗ್ಗೆ ಇಂದು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ  ಪ್ರತಾಪ್ ಸಿಂಹ ಎಚ್ ವಿಶ್ವನಾಥ್ ಒಬ್ಬ ಮತಿಗೆಟ್ಟ ವ್ಯಕ್ತಿ ,ಇವರು ನೀಡಿದ ಹೇಳಿಕೆ ಇವರ ಯೋಗ್ಯತೆಯನ್ನು ತೋರಿಸಿಕೊಡುತದೆ,ಕಪ್ಪು ಹಣದ ಬಗ್ಗೆ ಮೋದಿ ಅವರು ಕೈಗೊಂಡ ಕ್ರಮ ಇವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ,ಎಚ್ ವಿಶ್ವನಾಥ್ ಒಬ್ಬ ಹುಚ್ಚು ನಾಯಿ ಎಂದು ಮೈಸೂರ್ ಬಿಜೆಪಿ ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿರುತಾರೆ ಎಂದು ತಿಳಿದು ಬಂದಿದೆ 




No comments