Breaking News

ಜಯಲಲಿತಾ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಮೃತಪಟ್ಟಿದ್ದವರ ಕುಟುಂಬಕ್ಕೆ 3ಲಕ್ಷ ಪರಿಹಾರ.

ಚೆನ್ನೈ : ಮುಖ್ಯಮಂತ್ರಿ ಜಯಲಲಿತಾ ಸಾವಿನ ಸುದ್ದಿ ಕೇಳಿ ದುಃಖ ಹಾಗೂ ಆಘಾತದಿಂದ ಸಾವನ್ನಪ್ಪಿದ್ದ 597 ಮಂದಿಗೆ AIADMK ಪಕ್ಷ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಜೊತೆಗೆ ಜಯಲಲಿತಾ ಸಾವಿನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಪಕ್ಷದ ಕಾರ್ಯಕರ್ತ ಹಾಗೂ ಬೆರಳು ಕುಯ್ದುಕೊಂಡಿದ್ದ ಮತ್ತೋರ್ವನಿಗೆ ತಲಾ 50,000 ಪರಿಹಾರ ಘೋಷಿಸಿದೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ತಮಿಳರಿಂದ ಪುರಚ್ಚಿ ತಲೈವೀ ಎಂದೇ ಕರೆಸಿಕೊಳ್ಳುತ್ತಿದ್ದ ಜಯಲಲಿತಾ ಹೃದಯಾಘಾತದಿಂದಾಗಿ ಡಿಸೆಂಬರ್ 5ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

No comments