Breaking News

ಉಡುಪಿ ಹಿರಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಹಿರಿಯಡ್ಕ : ಹಿರಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಕೋಟನಕಟ್ಟೆ ಬಳಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಪ್ರವೀಣ್ ಕುಲಾಲ್ (45) ಹತ್ಯೆ ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಕೊಲೆಯಾದ ಪ್ರವೀಣ್ ಕುಲಾಲ್ ಮತ್ತು ಮೂರು-ನಾಲ್ಕು ವ್ಯಕ್ತಿಗಳು ಬಾರ್ ಒಂದರಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು, ಆದರೆ ಚರ್ಚೆ ವಿಕೋಪಕ್ಕೆ ತಿರುಗಿ ಗುಂಪು ಹಾಗೂ ಪ್ರವೀಣ್ ಮಧ್ಯೆ ಹೊಡೆದಾಟ ಪ್ರಾರಂಭವಾಗಿದೆ. ಪ್ರವೀಣ್ ಅಲ್ಲಿಂದ ಪ್ರಾಣ ರಕ್ಷಿಸಿಕೊಳ್ಳಲು ತಪ್ಪಿಸಿಕೊಂಡು ಹೊರಬಂದರು ಬೆಂಬಿಬಡದ ಗುಂಪು ಪ್ರವೀಣ್ ಮೇಲೆ ತಲವಾರುಗಳಿಂದ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ತಲವಾರು ದಾಳಿಗೆ ಪ್ರವೀಣ್ ಕುಲಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪ್ರವೀಣ್ ಕುಲಾಲ್ ಒಬ್ಬ ರೌಡಿ ಶೀಟರ್ ಆಗಿದ್ದು ಆತನ ಮೇಲೆ ಜಿಲ್ಲಾ ಪಂಚಾಯತ್ ಸದಸ್ಯನಿಗೆ ಬೆದರಿಕೆ ಹಾಕಿದ ಬಗ್ಗೆ ಹಾಗೂ ಇನ್ನೂ ಅನೇಕ ಪ್ರಕರಣಗಳು ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಉಡುಪಿ ಎಸ್ ಪಿ ಕೆಟಿ ಬಾಲಕೃಷ್ಣ ಜೊತೆಗೆ ಹಿರಿಯಡ್ಕ ಪೋಲೀಸರು, ಹೆಚ್ಚುವರಿ ಎಸ್ ಪಿ ಕುಮಾರ ಸ್ವಾಮಿ ಮತ್ತು ಇನ್ಸ್‌ಪೆಕ್ಟರ್ ಸಂಪತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

No comments