Breaking News

ಸಿಎಂ ಅಪ್ತರ ಮನೆ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆ ಮತ್ತು ನಗದು ವಶಕ್ಕೆ ತೆಗೆದುಕೊಂಡ ಇನಕಮ್ ಟ್ಯಾಕ್ಸ್ ಅಧಿಕಾರಿಗಳು

ಬೆಂಗಳೂರು :
ರಾಜ್ಯದ ಮುಖ್ಯಮಂತ್ರಿ ಯವರ ಅಪ್ತರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದೆ.
ಸಿದ್ದರಾಮಯ್ಯನವರ ಅಪ್ತರೆನ್ನಲಾದ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಆಗಿರುವ ಚಿಕ್ಕರಾಯಪ್ಪ ಅವರ ಮನೆ ಕಛೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆ ಸಹಿತ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಜಯಚಂದ್ರ ರಾಜ್ಯ ಹೆದ್ದಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಸಂಗೀತ ಕಣ್ಣನ್ ಗ್ರೂಪ್ಸ್ ಸಿಬ್ಬಂದಿ ಮತ್ತು ಪ್ರತಿಷ್ಠಿತ ಕೊಲಾಂಬಿಯಾ ಏಷಿಯಾ ಆಸ್ಪತ್ರೆಯ ನೋವೇಲ್ ಅಗರ್ವಾಲ್ ರವರ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳಿಗೆ ಬೆನಾಮಿ ಹೆಸರಿನಲ್ಲಿ ಮಾಡಿಟ್ಟಿರುವ ಅಸ್ತಿಪತ್ರಗಳು ದೊರೆತಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

No comments