Breaking News

ಕೇಂದ್ರ ಸರ್ಕಾರದ ಲಕ್ಕಿ ಗ್ರಾಹಕ್ ಯೋಜನೆಯಲ್ಲಿ ಮಂಗಳೂರು ಯುವಕನಿಗೆ ಖುಲಾಯಿಸಿದ ಅದ್ರಷ್ಟ


ಮಂಗಳೂರು : ರಿತೇಶ್ ಪೂಜಾರಿ ಇವರು ಕೃಷ್ಣಾಪುರ ಸುರತ್ಕಲ್ ನ ನಿವಾಸಿ ಮತ್ತು ಬೈಕಂಪಾಡಿಯಲ್ಲಿ ಉದ್ಯಮ ನಡೆಸುತ್ತಿರುವ ಇವರು ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾಗೆ ತನ್ನ ಸಮರ್ಥನೆ ನೀಡುವ ದೃಷ್ಟೀಯಿಂದ ತಮ್ಮ ಎಲ್ಲಾ ವ್ಯವಹಾರಗಳನ್ನು ಕ್ಯಾಶ್ ಲೆಸ್ ಡಿಜಿಟಲ್ ಪೇಮೆಂಟ್ ಮೂಲಕ  ಮಾಡುತ್ತಿದ್ದರು.

ಇದರ ಫಲವಾಗಿ 30-12-2016 ರಂದು ನಡೆದ ಲಕ್ಕಿ ಗ್ರಾಹಕ ಯೋಜನೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಲಕ್ಕಿ ಡ್ರಾ ಮೂಲಕ 1000 ರೂ ಅವರ ಖಾತೆಗೆ ಜಮೆ ಆಗಿದೆ. ಇವರು ತಮ್ಮ ಫೇಸ್ಬುಕ್ ನಲ್ಲಿ ಪ್ರಧಾನ ಮಂತ್ರಿಗೆ ದನ್ಯವಾದವನ್ನು ತಿಳಿಸಿರುತ್ತಾರೆ.



No comments