ಮದನಿ ಬಿಡುಗಡೆಗೆ ಆಗ್ರಹಿಸಿ PDP ಕಾರ್ಯಕರ್ತರಿಂದ ಪಾದಯಾತ್ರೆ
ಬೆಂಗಳೂರು : ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿಯ ಬಿಡುಗಡೆಗೆ ಆಗ್ರಹಿಸಿ PDP ಕಾರ್ಯಕರ್ತರು ಕೇರಳದಿಂದ ಬೆಂಗಳೂರಿಗೆ ರಾಲಿಗೆ ಚಾಲನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮಾರ್ಗದ ರಸ್ತೆಯನ್ನ ಬಂದ್ ಮಾಡಲಾಗಿದೆ ಮತ್ತು ಸಾವಿರಾರು ಪಿಡಿಪಿ ಕಾರ್ಯಕರ್ತರನ್ನು ಚಾಮರಾಜನಗರ ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ .
No comments