Breaking News

ಫೇಸ್'ಬುಕ್'ನಲ್ಲಿ ಸಿದ್ದರಾಮಯ್ಯನವರಿಗೆ ಕೊಲೆ ಬೆದರಿಕೆ FIR ದಾಖಲು


ಕೊಪ್ಪಳ : ಇತ್ತೀಚಿಗೆ ಗಂಗಾವತಿಯಲ್ಲಿ ಧ್ವಜ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಕೋಮು ಗಲಭೆಯಾಗಿ ಪೊಲೀಸರು ಪರಿಸ್ಥಿತಿಯನ್ನು ಹೋತೋಟಿಗೆ ತರಲು ಹರಸಾಹಸ ಪಟ್ಟಿದ್ದರು .ಇದೀಗ ಗಂಗಾವತಿಯ ತಾಲೂಕಿನ ಸುನೀಲ್ ರಾಯ್ಕರ್ ಎಂಬಾತ ಸಿಎಂ ಸಿದ್ಧರಾಮಯ್ಯರಿಗೆ ಫೇಸ್'ಬುಕ್'ನಲ್ಲಿ ಕೊಲೆ ಬೆದರಿಕೆಯೊಡ್ಡಿದ್ದಾನೆ .ಡಿಸೆಂಬರ್ 12 ರಂದು ಸಂಜೆ 6 ಗಂಟೆಗೆ ಫೇಸ್'ಬುಕ್ ಸ್ಟೇಟಸ್'ನ್ನು ಅಪ್'ಡೇಟ್ ಮಾಡಿದ್ದ ಸುನೀಲ್ ರಾಯ್ಕರ್ 'ಲೇ ಮುಖ್ಯಮಂತ್ರಿ ನಮ್ಮ ಊರಿಗೆ ಬಂದ್ರೇ ನಿನ್ನನ್ನ ಕೊಂದೆ ಬಿಡತ್ತಾರೆಲೇ' ಎಂದು  ಅಪ್'ಡೇಟ್ ಮಾಡಿದ್ದಾನೆ.ಈ ಕುರಿತು ಗಂಗಾವತಿ ನಗರ ಸಭೆ ಮಾಜಿ ಅಧ್ಯಕ್ಷ ನಿನ್ನೆ ಗಂಗಾವತಿ ನಗರ ಠಾಣೆಯಲ್ಲಿ ಸುನೀಲ್ ರಾಯ್ಕರ್ ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ಸುನೀಲ್ ವಿರುದ್ಧ FIR ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ .
source-suvarna news


No comments