Breaking News

ಮಹಿಳೆಯ ಅರ್ಧ ಮೃತದೇಹ ಚೀಲದಲ್ಲಿ ಹಾಕಿ ಚರಂಡಿಯಲ್ಲಿ ಎಸೆದ ದುಷ್ಕರ್ಮಿಗಳು.

ನವದೆಹಲಿ : ಆಗ್ನೇಯ ದೆಹಲಿಯ ಅಮರ್ ಕಾಲನಿ ಬಳಿ ತೆರೆದ ಚರಂಡಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಚೀಲವೊಂದರಲ್ಲಿ ಮೃತದೇಹದ ಮೇಲ್ಬಾಗ ಮಾತ್ರ ದೊರೆತಿದ್ದು ದೇಹದ ಕೆಳ ಅರ್ಧ ಭಾಗ ದೊರೆತಿಲ್ಲ. ಕಳೆದ 10 ದಿನಗಳಲ್ಲಿ ದೆಹಲಿಯ ದಕ್ಷಿಣ ಹಾಗೂ ಆಗ್ನೇಯ ಭಾಗದಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ.
ಪೋಲೀಸ್ ಹೇಳಿಕೆಯ ಪ್ರಕಾರ 'ಮೃತದೇಹವನ್ನು ಕಪ್ಪು ಚೀಲವೊಂದರಲ್ಲಿ ಹಾಕಿ ಬಸ್ಟಾಂಡ್ ಬಳಿಯ ತೆರೆದ ಚರಂಡಿಗೆ ಎಸೆಯಲಾಗಿದೆ. ಮೃತದೇಹದ ಸ್ಥಿತಿ ನೋಡಿದರೆ ಕೊಲೆ ಮಾಡಿ 24 ಗಂಟೆಗಳಾಗಿರಬಹುದು. ದೇಹದ ಕೆಲವು ಭಾಗ ಪ್ರಾಣಿಗಳು ತಿಂದಿದೆ, ಮೃತ ಮಹಿಳೆಯ ಕೈ ಕಟ್ಟಲಾಗಿದ್ದು, ಮಹಿಳೆಯ ವಯಸ್ಸು ಅಂದಾಜು 30ರ ಆಸುಪಾಸು ಇರಬಹುದು' ಎಂದು ಹೇಳಿದರು.
ಅಮರ್ ಕಾಲೊನಿ ಪೋಲೀಸರು ಕೊಲೆ ಪ್ರಕರಣ ದಾಖಲಿಸಿದ್ದು . ಸ್ಥಳೀಯ ಜನರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

No comments