Breaking News

ಮಕ್ಕಳು ಆಗಿಲ್ಲ ಎಂಬ ಕಾರಣಕ್ಕೆ ಸಜೀವ ದಹನಗೊಂಡ ದಂಪತಿ



ಕಾರ್ಕಳ : ಮಕ್ಕಳಿಲ್ಲ ಎಂಬ ಚಿಂತೆಯಿಂದ ಕೊರಗಿ ಸ್ವಯಂಪ್ರೇರಿತವಾಗಿ ಮನೆಯ ದೇವರ ಕೋಣೆಯಲ್ಲಿ ಕಟ್ಟಿಗೆ ರಾಶಿ ಹಾಕಿ ಅದಕ್ಕೆ ಅಗ್ನಿಸ್ವರ್ಶಗೈದು ದಂಪತಿ ಸಜೀವ ದಹನಗೊಂಡ ಘಟನೆ ಹಿರ್ಗಾನದ ಬೆಗೂರು ಎಂಬಲ್ಲಿ ನಡೆದಿದೆ .

 ಸೀತಾರಾಮ್ ಆಚಾರಿ (೫೫) ಸುನಂದಾ(೪೪) ದಂಪತಿ ಮಾನಸಿಕವಾಗಿ ಚಂಚಲವಾಗಿ ಇಂತ ಕಠೋರ ನಿರ್ಧಾರ ಕೈಗೊಂಡು  ಏಕಕಾಲದಲ್ಲಿ ಬದುಕಿಗೆ ಅಂತ್ಯ ಹೇಳಿದವರು. ಸುಮಾರು ೧೫೦ ಅಡಿ ದೂರದಲ್ಲಿ ಒಂದೆರಡು ಮನೆಗಳಿದ್ದು ಅಲ್ಲಿನ ಬಾವಿಯ ನೀರನ್ನೇ ಈ ದಂಪತಿಗಳು ಕುಡಿಯಲು ಹಾಗೂ ದಿನಬಳಕೆಗಾಗಿ ಉಪಯೋಗಿಸುತ್ತಾ ಇದ್ದರು. ಪ್ರತಿದಿನ ಬಾವಿಯ ನೀರು ಕೊಂಡು ಹೋಗುತ್ತಿದ್ದ ಪರಿಪಾಠ ಬೆಳೆಸಿಕೊಂಡಿದ್ದ ದಂಪತಿ ಗುರುವಾರ ಬೆಳಿಗ್ಗೆ ನೀರು ಕೊಂಡುಹೋದವರು ಮತ್ತೇ ಹಿಂತಿರುಗಿಯೇ ಇಲ್ಲ. ಇದರಿಂದ ಅನುಮಾನಗೊಂಡು ನೆರೆಕರೆಯವರು ನಿನ್ನೆ ಮನೆ ಕಡೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

No comments