Breaking News

ಪಕ್ಷದಿಂದ ಕಿತ್ತು ಹಾಕಿದರೂ ರಕ್ತದಿಂದ ಕಾಂಗ್ರೆಸ್ ತೆಗೆಯಲು ಸಾಧ್ಯವಿಲ್ಲ : ಜನಾರ್ಧನ ಪೂಜಾರಿ


ಮಂಗಳೂರು : ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದಾ ಕೆಂಡ ಕಾರುವ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಹೈ ಕಮಾಂಡ್ಗೆ ದೂರು ನೀಡಿದ್ದರು ಮತ್ತು ಎಐಸಿಸಿ ಯಿಂದ ಜನಾರ್ಧನ ಪೂಜಾರಿಗೆ ನೋಟೀಸ್ ಜಾರಿ ಆಗಿದೆ ಎಂದು ಟಿವಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು .

ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ ಜನಾರ್ಧನ ಪೂಜಾರಿ ಅವರು ಹೈಕಮಾಂಡ್`​ನಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲ. ಕಾಂಗ್ರೆಸ್`ನಿಂದ ಉಚ್ಛಾಟನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷದಿಂದ ಕಿತ್ತು ಹಾಕಿದರೂ ರಕ್ತದಿಂದ ಕಾಂಗ್ರೆಸ್ ತೆಗೆಯಲು ಸಾಧ್ಯವಿಲ್ಲ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್`ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ..
ನನ್ನ ತಂದೆಯವರೂ ಕಟ್ಟಾ ಕಾಂಗ್ರೆಸ್ಸಿಗರು, ನಾನು ಅವರಿಗೆ ಹುಟ್ಟಿದ ಮಗು, ಕಾಂಗ್ರೆಸ್, ನೆಹರೂ ಎಂದರೆ ನನ್ನ ತಂದೆಗೂ ಪಂಚಪ್ರಾಣ. ತೆಗೆಯುವುದಾದರೆ ಇವತ್ತೇ ತೆಗೆದು ಬಿಸಾಡಿ. ನನಗೆ ಯಾವ ಬೇಸರವೂ ಇಲ್ಲ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

No comments