Breaking News

"ಮೋದಿ ತೊಲಗಿಸಿ ದೇಶ ರಕ್ಷಿಸಿ " ಆಂದೋಲನ ನಡೆಸಲಿರುವ ಮಮತಾ


ಕೋಲ್ಕೊತಾ :ನೋಟ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ದೀದಿ ರಣಕಹಳೆ ಮೊಳಗಿಸಿದ್ದಾರೆ . ಕೋಮು ಗಲಭೆ ಮೂಲಕ ರಾಜಕೀಯವನ್ನು ರಕ್ತಸಿಕ್ತ ಗೊಳಿಸಿದ ನರೇಂದ್ರ ಮೋದಿಯವರ ಕೈಯಲ್ಲಿ ದೇಶ ಸುರಕ್ಷಿತವಾಗಿಲ್ಲ .ನರೇಂದ್ರ ಮೋದಿಯವರನ್ನು ತೊಲಗಿಸಲು ಜನವರಿ ಒಂದರಿಂದ ಆಂದೋಲನ ನಡೆಸುವುದಾಗಿ ಪಶ್ಹಿಮ ಬಂಗಾಲ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ .
ಪಕ್ಷದ ಕೋರ್ ಕಮಿಟಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಜನರಿಗೆ ಮೋದಿಯವರ ಕಾರ್ಯವೈಖರಿ ಬಗ್ಗೆ ತಿಳುವಳಿಕೆ ಇಲ್ಲವಾಗಿದೆ ,ಅಲಿಬಾಬಾ ಮತ್ತು ಆತನ ನಾಲ್ಕು ಸಂಗಡಿಗರು ಎಲ್ಲ ನಿರ್ಧಾರವನ್ನು ಕೈಗೊಂಡು ಜನಜೀವನನ್ನೇ ಬುಡಮೇಲು ಮಾಡುತ್ತಿದ್ದಾರೆ,ಆದ್ದರಿಂದ "ಮೋದಿ ತೊಲಗಿಸಿ ದೇಶ ರಕ್ಷಿಸಿ "  ಘೋಷ ವಾಕ್ಯದೊಂದಿಗೆ ಬ್ರಹತ್ ಆಂದೋಲನ ನಡೆಸಲಿದ್ದೇವೆ ,ನೋಟ್ ಬ್ಯಾನ್ ಮಾಡುವ ಮುಖಾಂತರ ದೇಶದಲ್ಲಿ ಅಘೋಷಿತ  ತುರ್ತು ಪರಿಸ್ಥಿತಿ ಉಂಟಾಗಿದೆ ನಗದು ರಹಿತ ಅರ್ಥವ್ಯವಸ್ಥೆ ಬಗ್ಗೆ ಮಾತನಾಡುವ ಮೋದಿ ಅವರಿಗೆ ತೀವ್ರ ಮುಖ ಭಂಗವಾಗಿದೆ ,  ಪಶ್ಹಿಮ ಬಂಗಾಳದ ಮೂಲೆ ಮೂಲೆಗಳಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು 

No comments