Breaking News

ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಮತ್ತೆ ಐಸಿಯುಗೆ ದಾಖಲು.

ಚೆನ್ನೈ : ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದು ಮತ್ತೆ ಐಸಿಯು ಗೆ ದಾಖಲಿಸಲಾಗಿದೆ. ಜಯಲಲಿತ ಚೆನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ಗಂಟೆಗಳ ಹಿಂದೆಯಷ್ಟೇ ಎಐಎಡಿಎಂಕೆ ಪಕ್ಷದ ನಾಯಕರು ಜಯಲಲಿತ ಪೂರ್ಣ ಗುಣಮುಖವಾಗಿದ್ದು ಆದಷ್ಟು ಬೇಗ ತಮ್ಮ ಮುಖ್ಯಮಂತ್ರಿ ಪದವಿ ಅಲಂಕರಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.  ಇದಾದ ಕೆಲವೇ ಸಮಯಗಳಲ್ಲಿ ಜಯಲಲಿತಾಗೆ  ಹೃದಯಾಘಾತವಾಗಿದೆ.
ಎಐಎಡಿಎಂಕೆ ನಾಯಕಿ ಜಯಲಲಿತ ಕಿಡ್ನಿ ತೊಂದರೆಯ ಕಾರಣದಿಂದ ಸಪ್ಟೆಂಬರ್ 22 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No comments