Breaking News

ತೈಮೂರ್‌' ಹೆಸರು: ವಿವಾದಕ್ಕೆ ಸಿಲುಕಿದ ಸೈಫ್‌-ಕರೀನಾ


ಬಾಲಿವುಡ್‌ ತಾರಾ ದಂಪತಿ ಸೈಫ್‌ ಅಲಿ ಖಾನ್‌ ಹಾಗೂ ಕರೀನಾ ಕಪೂರ್‌ ತಮ್ಮ ಪುತ್ರನಿಗೆ ತೈಮೂರ್‌ ಅಲಿ ಖಾನ್‌ ಪಟೌಡಿ ಎಂದು ನಾಮಕರಣ ಮಾಡಿರುವುದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ತೈಮೂರ್‌ ಯಾರು?

ತೈಮೂರ್‌ ಎಂದರೆ ಕಬ್ಬಿಣ ಎಂಬ ಅರ್ಥವಿದೆ. ಉಕ್ಕಿನ ಮನುಷ್ಯ ಅಂತ ಕೂಡಾ ಖ್ಯಾತಿಯಾಗಿದ್ದ. ಇವನು ಮೂಲತಃ ಮಧ್ಯಏಷ್ಯಾದವ. ವಿಪರೀತ ರಣೋತ್ಸಾಹಿ, ವಿಸ್ತರಣಾವಾದಿ. ಛಂಗೇಸ್‌ಖಾನ್‌ನಂತೆ ಇಡೀ ಜಗತ್ತನ್ನೇ ಜಯಿಸಬೇಕೆಂದು 14ನೇ ಶತಮಾನದಲ್ಲಿ ಭಾರತದ ಮೇಲೆ ಆಕ್ರಮಣ ನಡೆಸಿದ್ದ . ಆಗ ದಿಲ್ಲಿಯಲ್ಲಿಒಂದು ಲಕ್ಷಕ್ಕೂ ಹೆಚ್ಚು ಭಾರತೀಯರ ನರಮೇಧ ನಡೆಸಿದ್ದ.ಇವನು ದಾಳಿ ನಡೆಸಿದ ಹೊತ್ತಿನಲ್ಲಿ ದಿಲ್ಲಿಯನ್ನು ತುಘಲಕ್‌ ವಂಶದ ನಾಸಿರುದ್ದೀನ್‌ ಮೊಹಮ್ಮದ್‌ ತುಘಲಕ್‌ ಆಳುತ್ತಿದ್ದ. ಭಾರತವನ್ನೇ ಸ್ಮಶಾನ ಸದೃಶ ಮಾಡಬೇಕೆಂದು ನಿಶ್ಚಿಯಿಸಿ ಸೇನೆಯನ್ನು ನುಗ್ಗಿಸಿದ್ದ. ಭಾರತದ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಮಾರಣಕಾಂಡವಾಗಿದೆ. ಜತೆಗೆ ಲೆಕ್ಕಕ್ಕೆ ಸಿಗದಷ್ಟು ಹಣ,ಬಂಗಾರ, ರತ್ನಗಳು, ವಜ್ರ-ವೈಢೂರ್ಯಗಳು, ಬೆಳ್ಳಿ ಹಾಗೂ ಹಿಂದೂ ಮಹಿಳೆಯರ ವಸ್ತ್ರಗಳನ್ನು ಲೂಟಿ ಮಾಡಿದ್ದನೆಂದು ಇತಿಹಾಸಕಾರರು ಹೇಳುತ್ತಾರೆ.
source -vk

No comments