Breaking News

ಜೆಡಿಎಸ್ ನಿಂದ ಹೊರಹೋದ ಶಾಸಕರು ಪಕ್ಷಕ್ಕೆ ಬೇಡ: ಕುಮಾರ ಸ್ವಾಮಿ


ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪಕ್ಷ ಬಿಟ್ಟು ಹೋಗಿರುವ ಭಿನ್ನ ಶಾಸಕರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಪಕ್ಷದಿಂದ ಹೊರ ಹೋದವರು ದೊಡ್ಡವರು ಅವರ ಬಗ್ಗೆ ಹೇಳುವುದು ಏನೂ ಉಳಿದಿಲ್ಲ,ಅಂತವರನ್ನು ಮರು ಸೇರ್ಪಡೆಗೊಳಿಸುದರಲ್ಲಿ ಅರ್ಥವಿಲ್ಲ. ಮತ್ತು  ಅಂಥವರು ನಮ್ಮ ಪಕ್ಷಕ್ಕೆ ಬೇಡವೇ ಬೇಡ ಎಂದು ಹೇಳಿದರು  
.ಆ ಶಾಸಕರು ಅಡ್ಡಮತದಾನ ಮಾಡುವುದಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ನಂತರ ಅದರಂತೆ ನಡೆದುಕೊಂಡರು. ಈಗ ಅವರ ಬಗ್ಗೆ ಹೆಚ್ಚೇನೂ ಮಾತನಾಡುವ ಅಗತ್ಯವಿಲ್ಲ ಎಂದರು.
ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ನಮ್ಮ ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ. ಸರಳ, ಸಜ್ಜನ, ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಒಂದು ತಿಂಗಳ ಹಿಂದೆಯೇ ಹೇಳಿದ್ದೇವೆ ಎಂದರು.
-source sanjevani

No comments