Breaking News

ವಕೀಲ ಮಣಿರಾಜ ಶೆಟ್ಟಿ ಮತ್ತು ಇನ್ಸ್ಪೆಕ್ಟರ್ ರಫೀಕ್ ನಡುವೆ ಮಾತಿನ ಚಕಮಕಿ


ಕಾರ್ಕಳ : ವಕೀಲರ ಮತ್ತು ಪೊಲೀಸ್ ಅಧಿಕಾರಿ ನಡುವೆ JMFC ನ್ಯಾಯಾಲಯದ ಹೊರಗೆ ನಡುವೆ ಮೌಖಿಕ ಯುದ್ಧ ನಡೆದು  ದೂರು ಪ್ರತಿ ದೂರು ಕಾರ್ಕಳ  ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದೆ .
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ರಫೀಕ್ ಮತ್ತು ವಕೀಲ ಮಣಿರಾಜ್  ಶೆಟ್ಟಿ ದೂರು ಪ್ರತಿ ದೂರು  ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ವಕೀಲ ಮಣಿರಾಜ ಶೆಟ್ಟಿ ಅವರು ಹೇಳುವ ಪ್ರಕಾರ ತನ್ನ ಕಕ್ಷಿದಾರನೊಂದಿಗೆ ನ್ಯಾಯಾಲಯ ಆವರಣದಲ್ಲಿ ಮಾತನಾಡುವ ಸಂದರ್ಭದಲ್ಲಿ ಕುಲಕ್ಷ ಕಾರಣಕ್ಕೆ  ಇನ್ಸ್ಪೆಕ್ಟರ್ ರಫೀಕ್ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ .ನಂತರ ಕಾರ್ಕಳ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಣಿರಾಜ ಶೆಟ್ಟಿ ಅವರು ನಾನು ಇತ್ತೀಚಿಗೆ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಇನ್ಸ್ಪೆಕ್ಟರ್ ರಫೀಕ್ ಕೆಂಪು ಕಲ್ಲುಗಳು ಸಾಗಿಸುವ ಕಾರು ಹಣ ಸಂಗ್ರಹಿಸಿದ ಬಗ್ಗೆ ಆರೋಪ ಮಾಡಿದ್ದೆ ಇದಕ್ಕೆ ಸಂಬಂಧಿಸಿದಂತೆ ರಫೀಕ್ ಈಗ  ನನ್ನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದಾರೆ ಎಂದು ಹೇಳಿದರು .ಮತ್ತು ತನ್ನ ಕಕ್ಷಿದಾರ ವಿಲಿಯಂ ಡಿಸೋಜಾ ಅವರಿಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರವಾಗಿ ಪೊಲೀಸ್ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು .
ರಫೀಕ್ ಅವರು  ಕರ್ತವ್ಯ ಅಡಚಣೆ ಆರೋಪಿಸಿ ವಕೀಲ ಮಣಿರಾಜ ಶೆಟ್ಟಿ ಅವರ ವಿರುದ್ಧ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ 



No comments