Breaking News

ಪ್ರವೀಣ್ ಕುಲಾಲ್ ಹತ್ಯೆಗೆ ಸುಪಾರಿ ನೀಡಿದ ಸಂತು ?


ಉಡುಪಿ: ಹಿರಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಕೋಟನಕಟ್ಟೆ ಬಳಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಪ್ರವೀಣ್ ಕುಲಾಲ್ (45) ಹತ್ಯೆ ಮಾಡಲಾಗಿತ್ತು .ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು .ಬಂಧಿತ ಆರೋಪಿಗಳನ್ನು ಹಿರಿಯಡ್ಕ ಪುತ್ತಿಗೆ ನಿವಾಸಿ ಸಂತೋಷ್ ಶೇರಿಗಾರ್ ,ಪಡುಬಿದರಿ ಪಲಿಮಾರ್ ನಿವಾಸಿ ರಿತೇಶ್ ಮತ್ತು ಓಂತಿಬೆಟ್ಟು ಗ್ರಾಮದ ಸಂತೋಷ್ ಶೆಟ್ಟಿ ಎಂದು ಗುರುತಿಸಲಾಗಿದೆ .
ಹಿರಿಯಡ್ಕ ಸುಧಾಕರ ಪೂಜಾರಿ ಮತ್ತು  ದೊಡ್ಡೇರಂಗಡಿ ಯತೀಶ್ ಶೆಟ್ಟಿ ಹತ್ಯೆ ಗೈದು ಬೆಳಗಾವಿ ಜೈಲಿನಲ್ಲಿ  ಜೀವವಾಧಿ ಶಿಕ್ಷೆ ಅನುಭವಿಸುತ್ತಿರುವ ಗುಡ್ಡೆಯಂಗಡಿ ನಿವಾಸಿ ಸಂತೋಷ್ ಪೂಜಾರಿ ಯಾನೆ ಸಂತು ಪ್ರವೀಣ್ ಕುಲಾಲ್  ಹತ್ಯೆಗೆ ಸುಪಾರಿ ನೀಡಿದ್ದಾನೆ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ,ಕೊಲೆ ಆರೋಪಿಗಳಲ್ಲಿ ರಿತೇಶ್ ಪೂಜಾರಿ ಸುಪಾರಿ  ನೀಡಿರುವ ಸಂತುವಿನ ಚಿಕ್ಕಮ್ಮನ ಮಗನಾಗಿದ್ದಾನೆ ಎಂದು ತಿಳಿದು ಬಂದಿದೆ  


No comments